ದೊಡ್ಡಮನಿ ಎಂ ಮಂಜುನಾಥ್ ರವರ “ಮಂಜು ಕರಗುವ ಮುನ್ನ” ಎಂಬ ಕೃತಿ ಭಾನುವಾರ ಲೋಕಾರ್ಪಣೆ


ಬೆಂಗಳೂರು : ದೊಡ್ಡಮನಿ ಎಂ ಮಂಜುನಾಥ್ ರವರ “ಮಂಜು ಕರಗುವ ಮುನ್ನ” ಎಂಬ ಕೃತಿಯು ದಿನಾಂಕ : 21.08.೨೦೧೧ ನೇ ಭಾನುವಾರ ಬೆಳಗ್ಗೆ 10:೩೦ ಕ್ಕೆ ಸರಿಯಾಗಿ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ.
ಮಂಜು, ದೊಡ್ಡಮನಿ.
ಸಮಾರಂಭದಲ್ಲಿ ಖ್ಯಾತ ಕತೆಗಾರರಾದ ಶ್ರೀ ಕುಂ. ವಿರಭದ್ರಪ್ಪ, ಖ್ಯಾತ ಸಾಹಿತಿ, ವಿಜ್ಞಾನಿ ಶ್ರೀ ರಮೇಶ್ ಕಾಮತ್, ಖ್ಯಾತ ಕವಿ ಹಾಗೂ ಸಿನಿಮಾ ಸಾಹಿತಿ ಶ್ರೀ ಹೃದಯ ಶಿವ,  ಕವಿ ಹಾಗೂ ಕುವೈತ್ ಕನ್ನಡಿಗರಾದ ಡಾ. ಆಜಾದ್ ಐ.ಎಸ್ ಮೊದಲಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್ ನೊಂದಿಗೆ ಮಾತನಾಡಿದ ದೊಡ್ಡಮನಿ ಎಂ ಮಂಜುನಾಥ್ ರವರು ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ. ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು” ಹಾಗೂ “ಬೆನಕ ಬುಕ್ ಬ್ಯಾಂಕ್”ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು “ಮಂಜು ಕರಗುವ ಮುನ್ನ” ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲೇ ವಿನೂತನ (ನನಗೆ ತಿಳಿದ ಮಟ್ಟಿಗೆ) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ. ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಅಲ್ಲದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ದೊಡ್ಡಮನಿ ಎಂ ಮಂಜುನಾಥ್ ರವರ ಕವನ ಸಂಕಲನ “ಮಂಜು ಕರಗುವ ಮುನ್ನ” ಮತ್ತು ರೂಪ ಎಲ್ ರಾವ್ ಅವರ “ಪ್ರೀತಿ..! ಏನೆನ್ನಲ್ಲಿ ನಿನ್ನಾ..?” ಅಲ್ಲದೆ ಸುಧೇಶ್ ಶೆಟ್ಟಿ ಅವರ “ಹೆಜ್ಜೆ ಮೂಡದ ಹಾದಿ” ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವೀ ಆಗಿ ನಡೆಸಿ ಕೊಟ್ಟು, ಈ ಕವನ ಸಂಕಲನವನ್ನು ಎಂದಿನಂತೆ ಸ್ವಾಗತಿಸಿ ಹರಸಿ ಹಾರೈಸಿ ಆಶೀರ್ವದಿಸಿ ಪ್ರೋತ್ಸಹಿಸಬೇಕೆಂದು ತಿಳಿಸಿದ್ದಾರೆ.