ವಿಶ್ವ ಕನ್ನಡ ಸಮ್ಮೇಳನ ೨೦೧೧

ವಿಶ್ವ ಕನ್ನಡ ಸಮ್ಮೇಳನ ೨೦೧೧ ಬೆಳಗಾವಿ
ಸಮಗ್ರ ಮಾಹಿತಿ ವೆಬ್ ಸೈಟ್  ನಲ್ಲಿ

ಸಂಪಾದಕೀಯ: ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...

ಸಂಪಾದಕೀಯ: ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...: "ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಕನ್ನಡಪ್ರಭ ನಂ.೧ ಪತ್ರಿಕೆಯಾಗಬಹುದೇ ಎಂಬ ಪ್ರಶ್ನೆ ಇಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಅಗ್ದಿ ಜೋರಾಗಿಯೇ ಮತ..."

ಬಿಎಸ್ ಯಡಿಯೂರಪ್ಪ ಆಸ್ತಿ?


ಭೂಹಗರಣಗಳ ಆರೋಪಗಳನ್ನು ಹೊತ್ತಿರುವ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಆಸ್ತಿ ವಿವರಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಹಿರಂಗಪಡಿಸಲಾಗಿದೆ.

ಭೂಹಗರಣದಿಂದ ಸಿಎಂ ಕುಟುಂಬಕ್ಕೆ ಸುಮಾರು 100 ಕೋಟಿ ರು.ಗೂ ಅಧಿಕ ಲಾಭವಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಹೊರೆಸಿದ್ದವು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಜನವರಿ 31, 2011ಕ್ಕೆ ಸಲ್ಲುವಂತೆ ಬ್ಯಾಂಕ್ ಠೇವಣಿ, ಚಿರಾಸ್ತಿ, ಚರಾಸ್ತಿ, ಷೇರುಗಳು ಮುಂತಾದ ಸಂಪೂರ್ಣ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟರು. ಆಸ್ತಿ ವಿವರದ ನಕಲು ಪ್ರತಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೂ ಸಲ್ಲಿಸಿದ್ದಾರೆ. 

2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ಒಟ್ಟು ಮೌಲ್ಯ 1.82 ಕೋಟಿ ರು ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ನಂತರ ಲೋಕಾಯುಕ್ತರಿಗೆ ಸಲ್ಲಿಸಿದ ವಾರ್ಷಿಕ ವಿವರಗಳಲ್ಲಿ ಆಸ್ತಿ ಮೌಲ್ಯ 5.38 ಕೋಟಿ ರು ಎಂದು ಬಹಿರಂಗಪಡಿಸಿದ್ದರು. ಆದರೆ, ಇಂದು ಮಾಧ್ಯಮಗಳ ಮುಂದೆ ಸಲ್ಲಿಸಿದ ಪ್ರತಿಯಲ್ಲಿ ಒಟ್ಟು ಮೌಲ್ಯದ ವಿವರಗಳಿರಲಿಲ್ಲ. ಅಲ್ಲದೆ, ನನಗೆ ನನ್ನ ಮಕ್ಕಳಿಗೆ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಇಲ್ಲ ಎಂದು ವಿಶೇಷವಾಗಿ ಯಡಿಯೂರಪ್ಪ ಅವರು ಸೂಚಿಸಿದ್ದರು.

ಒಟ್ಟು ಮೌಲ್ಯ ತಿಳಿಯದಿದ್ದರೂ ಅಸಮಗ್ರವಾದ ಸಿಎಂ ಆಸಿ ವಿವರ ಇಲ್ಲಿದೆ:

ಮನೆ ಹಾಗೂ ನಿವೇಶನಗಳು: ಶಿಕಾರಿಪುರದಲ್ಲಿ ಎರಡು ಮನೆಗಳಿವೆ. ಒಂದು ಮನೆ ಹೆಂಡತಿ ಮನೆ ಕಡೆಯಿಂದ ಬಂದದ್ದು, 2004ರಲ್ಲಿ ಶಿಕಾರಿಪುರದಲ್ಲಿ ಮತ್ತೊಂದು ಮನೆ ಖರೀದಿ.

* ಬೆಂಗಳೂರಿನ ಆರ್ ಎಂವಿ ಬಡಾವಣೆಯಲ್ಲಿ ಸಿಎಂ ನಿವಾಸವಿದೆ.
* ಬೆಂಗಳೂರಿನಲ್ಲಿ 65 X 85 ಬಿಡಿಎ ನಿವೇಶನ.
* ತಿರುಮಲಾಪುರದಲ್ಲಿ 5.02 ಎಕರೆ ಕೃಷಿ ಭೂಮಿ.
* ಚನ್ನಹಳ್ಳಿ 4.10 ಎಕರೆ ಕೃಷಿ ಭೂಮಿ.
* ಶಿರಾಳಕೊಪ್ಪದಲ್ಲಿ ಕೈಗಾರಿಕಾ ಉದ್ದೇಶದಿಂದ 9.12 ಎಕರೆ ಭೂಮಿ ಖರೀದಿ.

ಬ್ಯಾಂಕ್ ಠೇವಣಿ, ಷೇರುಗಳು: 
* ಶಿಕಾರಿಪುರದ ಕೆನರಾ ಬ್ಯಾಂಕ್ ನಲ್ಲಿ 2,19,636 ರು ಹಣ.
* ಶಿವ ಸಹಕಾರಿ ಬ್ಯಾಂಕ್ ನಲ್ಲಿ 20 ಸಾವಿರ ಠೇವಣಿ.
* ಅಪೆಕ್ಸ್ ಬ್ಯಾಂಕ್ ವಿಧಾನಸೌಧ ಶಾಖೆಯಲ್ಲಿ 17 ಲಕ್ಷ 25ಸಾವಿರ 131 ರುಪಾಯಿಗಳು
* ಸಾಫ್ಟ್ ವೇರ್ ಟೆಕ್ ಗ್ರೂಪ್ ನಲ್ಲಿ 100 ಷೇರುಗಳು
* ಜೆನಿತ್ ಇನ್ಫೋಟೆಕ್ ನಲ್ಲಿ 50 ಷೇರುಗಳು
* ಖೇತಾನ್ ಲಿಮಿಟೆಡ್ ನಲ್ಲಿ 70 ಷೇರುಗಳು
* ಶಿಕಾರಿಪುರ ಅರ್ಬನ್ ಬ್ಯಾಂಕ್ 100 ಷೇರುಗಳು

ವಿಮೆ ಹಣ, ಚಿನ್ನ ಬೆಳ್ಳಿ ಇತ್ಯಾದಿ:
* ಎಲ್ ಐಸಿ 1.72 ಲಕ್ಷ ರು.
* ಬಿಎಸ್ ಎನ್ ಎಲ್ ನಿಂದ ಪಿಂಚಣಿ ಹಣ
* 10 ಲಕ್ಷ ರು ಮೌಲ್ಯದ ಗೃಹೋಪಯೋಗಿ ವಸ್ತುಗಳು
* 76 ಕೆಜಿ ಬೆಳ್ಳಿ, 2ಕೆಜಿ 976ಗ್ರಾಂ ಬಂಗಾರ.
* ಒಂದು ಕಾಂಟೆಸ್ಸಾ ಕಾರು, ಒಂದು ಸ್ಕಾರ್ಪಿಯೋ ಕಾರು

ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಕಾಲದಲ್ಲಿ ಬಿಜೆಪಿ ಮುಖ್ಯಮಂತ್ರಿಗಳು ಆಸ್ತಿ ವಿವರ ಬಹಿರಂಗ ಪಡಿಸುವಂತೆ ಕರೆ ನೀಡಿದ್ದರು. ಇತ್ತೀಚೆಗೆ ರಿಡಿಫ್ ಅಂತರ್ಜಾಲ ತಾಣ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ನಾಲ್ಕನೇ ಸ್ಥಾನ ಪಡೆದಿದ್ದರು