ಸಮಸ್ತ ಕನ್ನಡ ಮನಸ್ಸುಗಳಿಗೆ ಕನ್ನಡ ರಾಜೋತ್ಸವದ ಶಭಾಶಯಗಳು
ನಮ್ಮ ನಿಮ್ಮ  ಹೆಮ್ಮೆಯ ಕನ್ನಡ ಜಿಲ್ಲಾ ಮಾಹಿತಿ ಜಾಲತಾಣ
 '' ಚಿತ್ತಾರದುರ್ಗ.ಕಾಂ '' ೫ನೇ ವಸಂತದತ್ತ
              (೧-೧೧-೧೧ ರಂದು ೫ನೇ ವಾರ್ಷಿಕೋತ್ಸವ ದ ಸಂಭ್ರಮದಲ್ಲಿ ''ಚಿತ್ತಾರದುರ್ಗ.ಕಾಂ ' ')


ಗೌರಿ ಗಣೇಶ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು


ಗೌರಿ ಗಣೇಶ ಹಾಗೂ ರಂಜಾನ್ ಹಬ್ಬದ ಶುಭಾಶಯಗಳು
ಶುಭಾಕೊರುವವರು:ನಂದಿ ಜೆ ಹೂವಿನಹೊಳೆ

ದೊಡ್ಡಮನಿ ಎಂ ಮಂಜುನಾಥ್ ರವರ “ಮಂಜು ಕರಗುವ ಮುನ್ನ” ಎಂಬ ಕೃತಿ ಭಾನುವಾರ ಲೋಕಾರ್ಪಣೆ


ಬೆಂಗಳೂರು : ದೊಡ್ಡಮನಿ ಎಂ ಮಂಜುನಾಥ್ ರವರ “ಮಂಜು ಕರಗುವ ಮುನ್ನ” ಎಂಬ ಕೃತಿಯು ದಿನಾಂಕ : 21.08.೨೦೧೧ ನೇ ಭಾನುವಾರ ಬೆಳಗ್ಗೆ 10:೩೦ ಕ್ಕೆ ಸರಿಯಾಗಿ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ, ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆ.
ಮಂಜು, ದೊಡ್ಡಮನಿ.
ಸಮಾರಂಭದಲ್ಲಿ ಖ್ಯಾತ ಕತೆಗಾರರಾದ ಶ್ರೀ ಕುಂ. ವಿರಭದ್ರಪ್ಪ, ಖ್ಯಾತ ಸಾಹಿತಿ, ವಿಜ್ಞಾನಿ ಶ್ರೀ ರಮೇಶ್ ಕಾಮತ್, ಖ್ಯಾತ ಕವಿ ಹಾಗೂ ಸಿನಿಮಾ ಸಾಹಿತಿ ಶ್ರೀ ಹೃದಯ ಶಿವ,  ಕವಿ ಹಾಗೂ ಕುವೈತ್ ಕನ್ನಡಿಗರಾದ ಡಾ. ಆಜಾದ್ ಐ.ಎಸ್ ಮೊದಲಾದ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್ ನೊಂದಿಗೆ ಮಾತನಾಡಿದ ದೊಡ್ಡಮನಿ ಎಂ ಮಂಜುನಾಥ್ ರವರು ತುಂಬಾ ದಿನಗಳ ನನ್ನ ಕನಸು ಇದೀಗ ನೆರವೇರುತ್ತಿದೆ ಎಂದೋ ಹೊರಬರ ಬೇಕಿದ್ದ ನನ್ನ ಕವನ ಸಂಕಲನದ ಪುಸ್ತಕ ಈಗ ಲೋಕಾರ್ಪಣೆಗೆ ಸಿದ್ಧವಾಗಿದೆ ತಡವಾಗಲು ಕಾರಣ ನನ್ನ ಮೊಂಡತ. ನನ್ನ ಕಲ್ಪನೆಗೆ ತಕ್ಕ ಹಾಗೆ ಪುಸ್ತಕವನ್ನ ಹೊರತರಬೇಕು ಪುಸ್ತಕದಲ್ಲಿ ಹೊಸತನ ತುಂಬಬೇಕು ಅನ್ನೋ ಹಠದಲ್ಲಿ ನಾನು ಇಷ್ಟು ದಿನ ನನ್ನ ಕನಸನ್ನ ನನ್ನಲ್ಲಿ ಇಟ್ಟು ಕಾಪಾಡಿದೆ ಕೊನೆಗೆ ಎಲ್ಲಾ ನನ್ನ ಕನಸುಗಳು ಮಂಜಿನಂತೆ ಕರಗುವ ಮುನ್ನ ಕೆ.ಗಣೇಶ್ ಕೋಡೂರು” ಹಾಗೂ “ಬೆನಕ ಬುಕ್ ಬ್ಯಾಂಕ್”ನ ಬಳಗ ಮುಂದೆ ಬಂದು ನನ್ನ ಕಲ್ಪನೆಗಳಿಗೆ ಸ್ಪಂದಿಸಿ ಇಂದು “ಮಂಜು ಕರಗುವ ಮುನ್ನ” ಅನ್ನೋ ಹೆಸರಿನಡಿ ಕನ್ನಡ ಸಾಹಿತ್ಯ ಲೋಕದ ಇತಿಹಾಸದಲ್ಲೇ ವಿನೂತನ (ನನಗೆ ತಿಳಿದ ಮಟ್ಟಿಗೆ) ಅನಿಸೋ ಪುಸ್ತಕವನ್ನ ಲೋಕಾರ್ಪಣೆ ಮಾಡಲು ಸಹಕರಿಸಿದ್ದಾರೆ. ಹಾಗೆಯೇ ನಮ್ಮ ನಿಮ್ಮೆಲ್ಲರ ಬ್ಲಾಗ್ ಲೋಕದ ವಿಜ್ಞಾನಿ ಜ್ಞಾನಿ ಡಾಕ್ಟರ್ ಅಜಾದ್ ಅವರು ಈ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ ಅಲ್ಲದೇ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರ ಪಾತ್ರ ಅಪಾರ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಹಾಗೆ ಖ್ಯಾತ ಕವಿ ಮತ್ತು ಸಿನಿಮಾ ಸಾಹಿತಿ ಹೃದಯ ಶಿವ ಅವರು ಬೆನ್ನುಡಿ ಬರೆದು ಈ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ.

ದೊಡ್ಡಮನಿ ಎಂ ಮಂಜುನಾಥ್ ರವರ ಕವನ ಸಂಕಲನ “ಮಂಜು ಕರಗುವ ಮುನ್ನ” ಮತ್ತು ರೂಪ ಎಲ್ ರಾವ್ ಅವರ “ಪ್ರೀತಿ..! ಏನೆನ್ನಲ್ಲಿ ನಿನ್ನಾ..?” ಅಲ್ಲದೆ ಸುಧೇಶ್ ಶೆಟ್ಟಿ ಅವರ “ಹೆಜ್ಜೆ ಮೂಡದ ಹಾದಿ” ಪುಸ್ತಕಗಳು ಏಕಕಾಲದಲ್ಲಿ ಲೋಕಾರ್ಪಣೆ ಹೊಂದಲಿವೆ ತಾವೆಲ್ಲರೂ ಬಂದು ಕಾರ್ಯಕ್ರಮವನ್ನು ಯಶಸ್ವೀ ಆಗಿ ನಡೆಸಿ ಕೊಟ್ಟು, ಈ ಕವನ ಸಂಕಲನವನ್ನು ಎಂದಿನಂತೆ ಸ್ವಾಗತಿಸಿ ಹರಸಿ ಹಾರೈಸಿ ಆಶೀರ್ವದಿಸಿ ಪ್ರೋತ್ಸಹಿಸಬೇಕೆಂದು ತಿಳಿಸಿದ್ದಾರೆ.

ಸದ್ದುಗದ್ದಲವಿರದೆ ಗದ್ದುಗೆಗೇರಿದ ಸಾಧನೆ





ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ!
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳಗೆ ಮೂಡಿದೆ
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ!
ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ.
-ರಾಷ್ಟ್ರಕವಿ ಡಾ.ಜಿ.ಎಸ್.ಎಸ್.


ಲಿಂಗಾಯತ ಮಠಪರಂಪರೆಯಲ್ಲಿಯೇ ವಿಶಿಷ್ಟವಾದ ದಾಸೋಹದ ಮಠ ಶ್ರೀ ಸಿದ್ಧಗಂಗಾ ಮಠ. ಸಾರ್ಥಕ ೧೦೩ ವರ್ಷ ಕಳೆದಿರುವ ನಡೆದಾಡುವ ದೇವರು ಶ್ರೀ.ಶಿವಕುಮಾರ ಸ್ವಾಮಿಗಳು. ಗುರು ಪರಂಪರೆಯಲ್ಲಿಯೇ ಕಳಸ ಪ್ರಾಯರಾದವರು. ಶ್ರೀಗಳ ಜನನ ಬೆಂಗಳೂರು ಗ್ರಾ.ಜಿಲ್ಲೆ ಮಾಗಡಿ (ತಾ) ವೀರಾಪುರಗ್ರಾಮದಲ್ಲಿ. ತಂದೆ ಪಟೇಲ್ ಹೊನ್ನೇಗೌಡರು. ತಾಯಿ ಗಂಗಮ್ಮ ಜನನ ೧/೪/೧೯೦೮, ಬಾಲ್ಯ ವಿದ್ಯಾಭ್ಯಾಸ, ವೀರಾಪುರ ಮತ್ತು ಪಾಲನಹಳ್ಳಿ ಕೂಲಿಮಠದಲ್ಲಿ. ಎಂಟನೇ ವಯಸ್ಸಿನಲ್ಲಿ ತಾಯಿಯ ವಿಯೋಗ. ೧೩ನೇ ಮಗುವಾಗಿ ಜನಿಸಿದ ಶಿವಣ್ಣನ ಪ್ರಾಥಮಿಕ ವಿದ್ಯಾಭ್ಯಾಸ ನಾಗವಲ್ಲಿಯಲ್ಲಿ. ಹಿರಿಯಕ್ಕ ಪುಟ್ಟ ಹೊನ್ನಮ್ಮನ ಆರೈಕೆಯಲ್ಲಿ ಬೆಳೆದ ಶಿವಣ್ಣ. ೧೯೧೯ರಲ್ಲಿ ಅಂದಿನ ಲೋಯರ್ ಸೆಕೆಂಡರಿ ತೇರ್ಗಡೆಯಾದರು. ೧೯೨೨ರಲ್ಲಿ ತುಮಕೂರು ಸರ್ಕಾರಿ ಪ್ರೌಢಶಾಲೆ ಸೇರಿದರು. ೧೯೨೬ರಲ್ಲಿ ಮೆಟ್ರಿಕ್ ಪಾಸ್ ಮಾಡಿದರು. ಸಿದ್ದಗಂಗೆಯ ಶ್ರೀ ಉದ್ಯಾನ ಶಿವಯೋಗಿಗಳ ದಾಸೋಹ ಕೀರ್ತಿಯಿಂದ ಆಕರ್ಷಿತರಾದರು. ಶ್ರೀ ಉದ್ಧಾನ ಶಿವಯೋಗಿಗಳು ಶಿವಣ್ಣನಿಗೆ ಶ್ರೀಮಠದಲ್ಲಿ ಆಶ್ರಯ ನೀಡಿದರು. ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶಿವಣ್ಣ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ತೋಟದಪ್ಪನವರ ಛತ್ರದಲ್ಲಿ ಆಶ್ರಯ ಪಡೆದರು. ಸಿದ್ಧಗಂಗಾಮಠದ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದ ಶಿವಣ್ಣ ಕಟ್ಟುನಿಟ್ಟಿನ ವಿದ್ಯಾರ್ಥಿ ಜೀವನ ನಡೆಸಿದರು. ವಿದ್ವಾಂಸರಾದ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿಗಳ ಪ್ರಿಯ ಶಿಷ್ಯರೆನಿಸಿದರು. ವಿನಯ, ಸದಾಚಾರ, ಸತ್‌ಕ್ರಿಯಾಚರಣೆಗಳಿಂದ ಎಲ್ಲರ ಗಮನ ಸೆಳೆದರು.
ಆ ವೇಳೆಗೆ ಉದ್ಧಾನ ಶಿವಯೋಗಿಗಳ ಉತ್ತರಾಧಿಕಾರಿಗಳಾಗಿ ನಿಯೋಜಿತರಾಗಿದ್ದ ಮರುಳಾರಾಧ್ಯರು ಶಿವಣ್ಣನ ಆತ್ಮೀಯ ಒಡನಾಡಿಯಾಗಿದ್ದರು. ಪರೀಕ್ಷೆಗೆ ಸಿದ್ಧತೆ ನಡೆಸಿದ್ದಾಗ ೧೯೩೦ರಲ್ಲಿ ಮರುಳಾರಾಧ್ಯರು ಅಕಾಲ ಮರಣಕ್ಕೆ ತುತ್ತಾದರೆಂಬ ಸುದ್ಧಿ ಬಂದಿತು. ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಶಿವಣ್ಣನತ್ತ ಉದ್ಯಾನ ಶಿವಯೋಗಿಗಳ ಕೃಪಾದೃಷ್ಟಿ ಹರಿಯಿತು. ಸಿದ್ಧಗಂಗಾಮಠದ ಭಕ್ತರ ಅಭಿಲಾಷೆಯೂ ಸೇರಿತು. ಶ್ರೀ ಮಠದ ಜವಾಬ್ದಾರಿಗೆ ಶಿವಣ್ಣ ಒಪ್ಪಿಗೆ ಸೂಚಿಸಿದರು. ಹೆತ್ತ ತಂದೆ ಅಡ್ಡಿ ಬಂದರೂ ಶಿವಣ್ಣ ಜವಾಬ್ದಾರಿಯಿಂದ ವಿಮುಖರಾಗಲಿಲ್ಲ.
ಗೋಸಲ ಸಿದ್ಧೇಶ್ವರರಿಂದ ಹರಿದುಬಂದ ಸಿದ್ಧಗಂಗಾಮಠ ಪರಂಪರೆಯ ಮುಂದುವರಿಕೆಯಾಗಿ ೩-೩-೧೯೯೦ರಂದು ಶಿವಕುಮಾರ ದೇವರು ಪೀಠಾಧಿಕಾರಿಗಳಾಗಿ ನಿಯುಕ್ತರಾದರು. ಶ್ರೀ ಉದ್ಧಾನ ಶಿವಯೋಗಿಗಳವರ ಕಮ್ಮಟದಲ್ಲಿ ರೂಪುಗೊಂಡು ಶ್ರೀ ಶಿವಕುಮಾರ ಸ್ವಾಮಿಗಳಾಗಿ ಶ್ರೀ ಸಿದ್ಧಗಂಗಾಮಠದ ಶಿಕ್ಷಣ ಸಂಸ್ಥೆಗಳ ಮತ್ತು ಶ್ರೀ ಮಠದ ದಾಸೋಹ ವ್ಯವಸ್ಥೆಯ ಜವಾಬ್ದಾರಿಗೆ ಹೆಗಲು ಕೊಟ್ಟರು. ಆಗ ಶ್ರೀ ಮಠಕ್ಕೆ ಅಲ್ಪ ಆದಾಯವಿದ್ದಿತು. ನಡೆದೇ ಭಕ್ತರ ಮನೆಗೆ ಹೋಗಿ ದವಸ ಕಾಣಿಕೆ ತರಬೇಕಾಗಿತ್ತು. ಉತ್ಸಾಹಿ ತರುಣ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಕೊರಳಲಿ ಕಟ್ಟಿದ ಬೆಂಡು, ಕಾಲಲ್ಲಿ ಕಟ್ಟಿದ ಗುಂಡು, ಎಂಬಂಥ ಪರಿಸ್ಥಿತಿಯಲ್ಲಿ ಅಗ್ನಿದಿವ್ಯವನ್ನು ಧೈರ್ಯದಿಂದ ಎದುರಿಸಿದರು. ಭಕ್ತರ ಅಪಾರ ಪ್ರೀತಿಯನ್ನು ಗೌರವವನ್ನು ಸಂಪಾದಿಸಿದರು. ದಾಸೋಹ ನಿರ್ವಿಘ್ನವಾಗಿ ನಡೆಯುವಂತೆ ಮಾಡಿದರು. ಶ್ರೀ ಮಠದ ಕಾರ್ಯವ್ಯಾಪ್ತಿ ಹೆಚ್ಚಾದಂತೆ ದಾಸೋಹ ವ್ಯವಸ್ಥೆಯೂ ಬೆಳೆಯಿತು.
ಶ್ರೀ ಶಿವಕುಮಾರ ಸ್ವಾಮಿಗಳ ತ್ಯಾಗ ಜೀವನ ಅನುಪಮವಾದದ್ದು. ಮಾತು ಮನಗಳಿಂದತ್ತತ್ತ ಮೀರಿದ ವ್ಯಕ್ತಿತ್ವದ ದಿವ್ಯ ಮೂರುತಿ, ನಿಜವನರಿತ ನಿಶ್ಚಿಂತ, ಮರಣವ ಗೆದ್ದ ಮಹಂತ, ಪರಮವನೊಳಗೊಂಡ ಪರಿಣಾಮಿ. ಶ್ರೀ ಸಿದ್ಧಗಂಗಾಮಠದ ಇತಿಹಾಸದಲ್ಲಿ ಬೆಳಕಿನ ಯುಗವನ್ನು ಪ್ರಾರಂಭಿಸಿದ ನಿರ್ಮಲ ಮೂರ್ತಿ. ಶ್ರೀ ಶಿವಕುಮಾರಸ್ವಾಮಿಗಳದ್ದು ಎತ್ತರದ ನಿಲುವು, ವಿಶಾಲವಾದ ಹಣೆ ಸದಾ ಭಸ್ಮಧಾರಿ, ಪ್ರೀತಿ ಸೂಸುವ ಕಣ್ಣುಗಳು, ಮಾತೃ ಹೃದಯ, ಶುದ್ಧ ಕಾವಿಧಾರಿ, ಸೇವೆಯೇ ಜೀವನದ ಧ್ಯೇಯ, ಗಂಭೀರ ನಡಿಗೆ, ಮಾತು ಮಾಣಿಕ್ಯ, ಇಳಿವಯಸ್ಸಿನಲ್ಲೂ ಪ್ರಖರವಾದ ಶರಣ ಚಿಂತನ, ಅನುಭಾವದ ವಾಣಿಯಿಂದ ಅಭಿನವ ಬಸವಣ್ಣನವರಾಗಿದ್ದಾರೆ. ಸದಾ ಬಾಗಿದ ತಲೆ, ಹಸನ್ಮುಖ, ಎದ್ದು ಕಾಣುವ ಗಂಭೀರ ಮುಖಮುದ್ರೆ ಕಾಯಕ ದಾಸೋಹಗಳೇ ಮೈವೆತ್ತು ಬಂದಂತಿರುವ ಶ್ರೀ ಶಿವಕುಮಾರಸ್ವಾಮಿಗಳ ದರ್ಶನವೇ ಚೇತೋಹಾರಿ. ನಿರ್ಮಲಾಂತಃ ಕರಣವುಳ್ಳ ಶ್ರೀಗಳು, ತಮ್ಮ ಅಪೂರ್ವ ಪ್ರತಿಭೆಯಿಂದ ಬಾಳಿಗೊಂದು ಭರವಸೆ ನೀಡುವ ಆಶಾದೀಪವಾಗಿದ್ದಾರೆ.
ಕರುಣೆಯ ಮೂರ್ತಿಗಳಾಗಿದ್ದ ಶ್ರೀ ಉದ್ಧಾನ ಶಿವಯೋಗಿಗಳು ೧೧-೧-೧೯೪೧ರಂದು ಲಿಂಗದೊಳಗಾದರು. ಭಕ್ತರ ಸಹಕಾರದಿಂದ ಹಿರಿಯ ಶ್ರೀಗಳ ಸ್ಮರಣೆಯನ್ನು ಅದ್ಧೂರಿಯಾಗಿ ನೆರವೇರಿಸಿದರು. ಲಿಂಗಾಯತ ಜನಾಂಗ ವಿದ್ಯೆಯಿಂದ ವಂಚಿತರಾಗಿದ್ದಾರೆ. ವಿದ್ಯಾವಂತರಾದರೆ ಮಾತ್ರ ಸಮಾಜದ ಉದ್ಧಾರ ಸಾಧ್ಯವೆಂಬ ಪೂಜ್ಯ ಉದ್ಧಾನ ಶಿವಯೋಗಿಗಳು ೧೯೧೭ರಲ್ಲಿ ಶ್ರೀ ಸಿದ್ಧಲಿಂಗೇಶ್ವರ ಸಂಸ್ಕೃತ ಪಾಠಶಾಲೆ ಪ್ರಾರಂಭಿಸಿದರು. ಅದು ಮುಂದೆ ಸಂಸ್ಕೃತ ಕಾಲೇಜ್ ಆಗಿ ಇಂದಿಗೂ ನಡೆದುಬಂದಿದೆ. ೧೯೪೪ರಲ್ಲಿ ತುಮಕೂರಿನಲ್ಲಿ ಪ್ರೌಢಶಾಲೆ ಪ್ರಾರಂಭ ಮಾಡಿದರು, ನಂತರ ಗ್ರಾಮೀಣ ಜನರಿಗಾಗಿ ಹಲವಾರು ಗ್ರಾಮಾಂತರ ಶಾಲೆ, ಪ್ರೌಢಶಾಲೆ, ಕಾಲೇಜುಗಳನ್ನು ಸ್ಥಾಪಿಸಿದರು. ಸಾರ್ವಜನಿಕ ಗ್ರಂಥಾಲಯಗಳನ್ನು, ಶ್ರೀ ಸಿದ್ಧಲಿಂಗೇಶ್ವರ ಮುದ್ರಣಾಲಯವನ್ನು, ಸಂಶೋಧನಾ ಕೇಂದ್ರ ಮತ್ತು ಸಿದ್ಧಗಂಗಾ ಮಾಸಪತ್ರಿಕೆಯನ್ನು ೧೯೬೪ರಲ್ಲಿ ಪ್ರಾರಂಭಿಸಿದರು. ೧೯೬೩ರಲ್ಲಿ ಆರಂಭವಾದ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ ನಾಡಿನಲ್ಲೇ ಹೆಸರಾಂತ ಎಂಜಿನಿಯರ್‌ಗಳನ್ನು ತಯಾರು ಮಾಡುವ ಕೇಂದ್ರವಾಗಿದೆ.
ಶ್ರೀ ಸಿದ್ಧಗಂಗಾಮಠ ಹೆಸರಿಗೆ ಲಿಂಗಾಯುತ ಮಠ, ದಾಸೋಹ, ವಿದ್ಯಾದಾನಕ್ಕೆ ಜಾತಿ ಎಂದೂ ಅಡ್ಡಿಯಾಗಿಲ್ಲವೆಂಬುದು ಮಾತ್ರ ಸತ್ಯ. ಹಿಂದುಳಿದ ಅನೇಕ ಜಾತಿ, ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಲಿಂಗಾಯತರು, ಮರಾಠ, ಕ್ರೈಸ್ತ, ಜೈನ, ವಿಶ್ವಕರ್ಮ, ಬ್ರಾಹ್ಮಣ, ಮೊದಲಿಯರ್, ವೈಶ್ಯರು, ಮುಸ್ಲಿಮರು, ಪರಿಶಿಷ್ಟರು, ಮುಂತಾದ ಎಲ್ಲ ವರ್ಗ ವರ್ಣದ ಎಂಟು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಊಟ, ವಸತಿ, ವಿದ್ಯೆಯನ್ನು ಉಚಿತವಾಗಿ ನೀಡುತ್ತಿರುವ ಸಂಸ್ಥೆಯಾಗಿ ಬೆಳೆದಿದೆ. ಇವರಲ್ಲಿ ಅರ್ಧಭಾಗ, ಅನಾಥಮಕ್ಕಳಿರುವುದು ಇಲ್ಲಿನ ವಿಶೇಷ. ಅಪ್ಪ ಅಮ್ಮ ದೂರ ಮಾಡಿದ ಅನಾಥರಿಗೂ ಪ್ರೀತಿಯ ಕೊರತೆ ಕಂಡುಬಂದಿಲ್ಲ. ಕಿರಿಯ ಸ್ವಾಮಿಗಳಾದ ಶ್ರೀ ಸಿದ್ಧಲಿಂಗಸ್ವಾಮಿಗಳು ಸ್ವತಃ ನೂರಾರು ಅನಾಥ ಮಕ್ಕಳಿಗೆ ಬಿಸಿ ನೀರಿನ ಸ್ನಾನ ಮಾಡಿಸುತ್ತಾರೆಂಬುದನ್ನು ಕೇಳಿದಾಗ ವಿಸ್ಮಯವಾಯಿತು. ಕಾಯಕ ಮತ್ತು ದಾಸೋಹ ತತ್ವಗಳು ನಿಜವಾದ ಅರ್ಥದಲ್ಲಿ ಸಿದ್ಧಗಂಗೆಯಲ್ಲಿ ಸಾಕಾರಗೊಂಡಿದೆ. ಶರಣತತ್ವಗಳನ್ನು ತಮ್ಮ ಬದುಕಿನಲ್ಲಿ ಅಮೂಲ್ಯ ಸಂಪತ್ತನ್ನಾಗಿರಿಸಿಕೊಂಡಿರುವ ಶ್ರೀ ಶಿವಕುಮಾರ ಸ್ವಾಮಿಗಳಿಗೆ ನೂರು ವರ್ಷ ತುಂಬುತ್ತಿರುವಾಗಲೂ ನಿತ್ಯ ಜಂಗಮರಾಗಿ, ಗುರುವಂದನೆಗೆ ಪಾತ್ರರಾಗಿರುವುದು ವಿಶೇಷ. ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ ಎಂಬ ಬಸವಣ್ಣನವರ ವಾಣಿಯಂತೆ, ದಿನನಿತ್ಯದ ಬದುಕಿನ ಎಲ್ಲ ಕಾಯಕಗಳೂ ಸಮಾನವೆಂದೂ ಸ್ವತಃ ಆಚರಿಸಿ ತೋರಿಸಿದ್ದಾರೆ.
ಪೂಜ್ಯರ ದಿನಚರಿಯೊಂದು ವಿಸ್ಮಯ, ಬೆಳಗಿನ ಮೂರು ಗಂಟೆಗೆ ಏಳುವ ಸ್ವಾಮಿಗಳು ಶೌಚಾದಿ ನಿತ್ಯಕರ್ಮಗಳ ನಂತರ ಸ್ನಾನ, ಶಿವಪೂಜೆ ಏಕಾಂತ ಧ್ಯಾನ, ಶರಣರ ವಚನಗಳು, ಭಕ್ತಿಗೀತೆಗಳೊಂದಿಗೆ ಮಂಗಳ. ಹತ್ತಾರು ಭಕ್ತರ ನಡುವೆ ಗುರು, ಲಿಂಗ, ಜಂಗಮಾಚಾರಣೆ, ಮಾತು ಮೌನಗಳಿಂದತ್ತತ್ತ ಮೂಕವಾಗುವ ಅನುಭಾವ. ಇಷ್ಟಲಿಂಗಾರ್ಚನೆ ನಂತರ ಪ್ರಸಾದ ಸ್ವೀಕಾರ. ಅನುಭಾವದ ಹಾಡುಗಳನ್ನು ಪೂಜ್ಯರೇ ಹಾಡುತ್ತಾರೆ. ಮಿತ ಆಹಾರ, ಒಂದಿಷ್ಟು ಹಣ್ಣು ಭಕ್ತರೊಂದಿಗೆ ಪ್ರಸಾದ ಸ್ವೀಕರಿಸುವ ಸತ್ವಪರಂಪರೆ. ೫.೩೦ ರಿಂದ ಅಧ್ಯಯನ, ಕೆಲಕಾಲ ನಂತರ ದಿನನಿತ್ಯ ಕಾಯಕದತ್ತ ಗಮನ ಮುಂಜಾನೆಯ ಪ್ರಾರ್ಥನಾ ಸಭೆ ಸುಮಾರು ೪ ರಿಂದ ೫ ಸಾವಿರ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆಯಲ್ಲಿ ನಿತ್ಯ ಪಾಲ್ಗೊಳ್ಳುತ್ತಾರೆ. ಶ್ರೀ ಮಠದ ವಾತಾವರಣದಲ್ಲಿ ವಿದ್ಯುತ್ ಸಂಚಾರ. ೧೦ ನಿಮಿಷಗಳು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಆಶೀರ್ವಚನ. ಕಾರ್ಯಾಲಯಕ್ಕೆ ಆಗಮನ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ. ಹೊಲಗದ್ದೆಗಳ ಕೆಲಸಗಳ ಮಾಹಿತಿ ಪಡೆದು ಆಗಬೇಕಾದ ಕೆಲಸಗಳ ನಿರ್ದೇಶನ, ಕಟ್ಟಡ ನಿರ್ಮಾಣಗಳ ಪರಿಶೀಲನೆ, ಪತ್ರಗಳ ಪರಿಶೀಲನೆ, ಅವುಗಳಿಗೆ ಉತ್ತರ ಬರೆಸುವುದು, ಹೊರಗಿನಿಂದ ಬಂದ ಹರಗುರುಚರ ಮೂರ್ತಿಗಳೊಂದಿಗೆ ಧಾರ್ಮಿಕ, ಆಧ್ಯಾತ್ಮಿಕ ಚಿಂತನೆ. ಶಾಸಕರು, ಸಚಿವರೊಂದಿಗೆ ರಾಜ್ಯ, ರಾಷ್ಟ್ರ ರಾಜಕಾರಣದ ಆಗುಹೋಗುಗಳ ಪರಾಮರ್ಶೆ. ಹಿತೋಪದೇಶ.
ಶ್ರೀ ಸಿದ್ಧಗಂಗಾ ಮಠದಲ್ಲಿ ಪೂಜ್ಯರೇ ಜೀವಕಳೆ. ಭಕ್ತರು ಮಠಕ್ಕೆ ಬಂದರೆ ಪೂಜ್ಯರಿಗೆ ತುಂಬಿದ ಸಂತೋಷ. ಸ್ವಾಮೀಜಿಗಳ ದರ್ಶನ ಭಕ್ತರಿಗೆ ಅವರ್ಣನೀಯ ಆನಂದ. ತಮ್ಮ ಕಷ್ಟ ಸುಖಗಳ ನಿವೇದನೆ. ಪೂಜ್ಯರಿಂದ ಭಕ್ತರಿಗೆ ಸಾಂತ್ವಾನ, ಸಮಸ್ಯೆಗಳ ಪರಿಹಾರದಲ್ಲಿ ಪೂಜ್ಯರಿಗೆ ಆಸಕ್ತಿ ಮತ್ತು ತೃಪ್ತಿ. ಶಿವಕುಮಾರ ಸ್ವಾಮಿಗಳ ದರ್ಶನ ಭಾಗ್ಯದಿಂದ ಭಕ್ತರಿಗೆ ನೆಮ್ಮದಿ. ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ಸ್ವೀಕರಿಸಿ ಎಂಬ ಪೂಜ್ಯರವಾಣಿ, ಪ್ರಸಾದ ಸ್ವೀಕರಿಸುವುದರಿಂದ ಧನ್ಯತೆಯ ಭಾವ. ಪ್ರಸಾದ ಮಂದಿರದ ಉಸ್ತುವಾರಿಯೂ ಪೂಜ್ಯರದೆ. ಶರಣ ಸಂಸ್ಕೃತಿ ಮತ್ತು ದಾಸೋಹ ಸಂಸ್ಕೃತಿಯ ಪ್ರತ್ಯಕ್ಷ ರೂಪ ಸಿದ್ಧಗಂಗಾಮಠ. ಸರ್ವಸಮಾನತೆ, ಎನಗಿಂತ ಕಿರಿಯರಿಲ್ಲ ಎಂಬ ವಿನಮ್ರ ಭಾವ.
ಸಿದ್ಧಗಂಗಾ ಮಠದ ಸ್ವಾಮಿಗಳ ಜೀವನವೇ ಒಂದು ಆದರ್ಶ. ಪೂಜ್ಯರು ಶ್ರೀಮಠವನ್ನು ಅಭಿವೃದ್ಧಿ ಪಡಿಸಿದ ರೀತಿ, ಅದನ್ನು ನಡೆಸಿಕೊಂಡು ಬರುತ್ತಿರುವ ರೀತಿ ಅನನ್ಯವಾದದ್ದು. ಜಾತಿಮತವನ್ನು ಲೆಕ್ಕಿಸದೆ ೭೧ ವರ್ಷಗಳಿಂದ ಮಠವನ್ನು ಪ್ರಗತಿಯತ್ತ ಮುನ್ನಡೆಸುತ್ತಿರುವುದು, ಎಂಥವರಲ್ಲೂ ಅಭಿಮಾನ, ಗೌರವ ಮೂಡಿಸುತ್ತದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ, ದಾಸೋಹ ನೀಡುತ್ತಿರುವ ಶ್ರೀ ಶಿವಕುಮಾರ ಸ್ವಾಮಿಗಳ ಸಾಧನೆ ಸಾಮಾನ್ಯದ್ದಲ್ಲ. ರಾಜ್ಯದ ಹೊರರಾಜ್ಯದ ಎಲ್ಲ ಮಠಾಧೀಶ್ವರರೊಂದಿಗೆ, ಅನ್ಯಧರ್ಮದ ಧರ್ಮಾಧಿಕಾರಿಗಳೊಂದಿಗೆ ಸೌಹಾರ್ದ ಸಂಬಂಧ ಇಟ್ಟುಕೊಂಡಿದ್ದಾರೆ. ಶ್ರೀಗಳ ಆಹ್ವಾನದ ಮೇರೆಗೆ ರಾಜ್ಯದ ಎಲ್ಲ ಮುಖ್ಯಮಂತ್ರಿಗಳು ರಾಜ್ಯಪಾಲರು ಮಾತ್ರವಲ್ಲ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳೂ ಸಿದ್ಧಗಂಗಾ ಮಠಕ್ಕೆ ಬಂದಿದ್ದಾರೆ. ಶ್ರೀ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆಂದರೆ ಅತಿಶಯೋಕ್ತಿ ಏನಲ್ಲ.
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೆಂಗಳೂರಿನಿಂದ ೬೫ ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಬಲಭಾಗದಲ್ಲಿ, ರೈಲುದಾರಿ ದಾಟಿ ಸುಮಾರು ೧/೨ ಕಿ.ಮೀ. ದೂರದಲ್ಲಿ ಸಿದ್ಧಗಂಗೆ ಬೆಟ್ಟದ ತಡಿಯಲ್ಲಿದೆ. ಇತಿಹಾಸ ಪ್ರಸಿದ್ಧ ಶ್ರೀ ಸಿದ್ಧಗಂಗಾ ಮಠ. ಪ್ರಕೃತಿ ಸೌಂದರ್ಯದ ಮ್ಯೆ, ಗಟ್ಟಿ ಕಣಶಿಲೆಯ ಬೆಟ್ಟದ ಮೇಲೆ ಪವಿತ್ರವಾದ ಸಿದ್ಧಗಂಗೆ ಕೊಳವಿದೆ. ವರ್ಷದುದ್ದಕ್ಕೂ ಶಿಲೆಯ ಮಧೆ ಹರಿದು ಬರುವ ಶೀತಲ ಜಲ, ಕೊಳದಲ್ಲಿ ಪೂಜೆಗೊಳ್ಳುತ್ತಿದೆ. ಬೃಹದಾಕಾರದ ಬಂಡೆಗಳ ಮಧ್ಯೆ ಕ್ಷೇತ್ರದ ದೇಗುಲವೂ ಇದೆ. ಸುಮಾರು ೭೦೦ ವರ್ಷಗಳ ಹಿಂದೆ ಗೋಸಲ ಸಿದ್ದೇಶ್ವರರು ಶ್ರೀಮಠ ಸ್ಥಾಪಿಸಿದರೆಂದು ತಿಳಿದುಬರುತ್ತದೆ. ನೂರೊಂದು ವಿರಕ್ತರೊಂದಿಗೆ ಶಿವಗಂಗೆ ಮತ್ತು ಸಿದ್ಧಗಂಗೆ ಕ್ಷೇತ್ರಗಳಲ್ಲಿ ಮಠ ಸ್ಥಾಪಿಸಿದರೆಂಬ ಉಲ್ಲೇಖಗಳಿವೆ. ಈ ಪರಂಪರೆ ಮುಂದುವರಿದು ಬಂದಿದೆ. ಬೆಟ್ಟದ ಮೇಲಿರುವ ಕಲ್ಲಿನ ಬೃಹತ್ ಬಂಡೆಗಳ ಮಧ್ಯದ ಗಂಗಾಮಾತೆ, ಶ್ರೀ ಸಿದ್ಧಲಿಂಗೇಶ್ವರ ಪೂಜಾ ಮಂದಿರಗಳು ಬೆಟ್ಟದ ಆರಂಭದಲ್ಲಿ ಹಳೆಮಠ, ಉದ್ಧಾನ ಶಿವಯೋಗಿಗಳ ಗದ್ದುಗೆ ಬೆಟ್ಟಕ್ಕೆ ಹೋಗುವ ವಿಶಾಲವಾದ ಪಾವಟಿಗಳು ಮಾರ್ಗಮಧ್ಯದಲ್ಲಿ ಪುಷ್ಕರಣಿ, ಅಡಿಗೆ ಕೋಣೆಯಲ್ಲಿ ದೊಡ್ಡ ಗಾತ್ರದ ಅಡುಗೆ ಪಾತ್ರೆ, ಕೊಳಗಗಳು, ಮುಪ್ಪಿನ ಸ್ವಾಮಿಗಳ ಗದ್ದುಗೆ, ಮಹಾನವಮಿ ಮಂಟಪ, ಶ್ರೀ ಮರುಳಾರಾಧ್ಯರ ಗದ್ದುಗೆ, ಗೋಶಾಲೆ, ಪೂಜ್ಯರ ಕಾರ್ಯಾಲಯ, ದರ್ಶನ ಕೊಠಡಿ, ಪವಿತ್ರ ಮಂಚ, ಶ್ರೀ ಅಡವಿ ಸ್ವಾಮಿಗಳ ಗದ್ದುಗೆ, ಸಿದ್ಧಗಂಗಾ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಾಲಯ, ಮುದ್ರಣಾಲಯ, ಅಕ್ಕಿಗಿರಣಿ, ಅಂಧರ ಪಾಠಶಾಲೆ, ವೇದಪಾಠಶಾಲೆ, ಕಲ್ಯಾಣ ಮಂಟಪ, ವಸತಿ ಗೃಹಗಳು, ತರಬೇತಿ ಸಂಸ್ಥೆಗಳು ವಸ್ತು ಪ್ರದರ್ಶನದ ವಿಶಾಲ ಆವರಣ, ಸುತ್ತ ತೆಂಗಿನ ತೋಟಗಳು, ಭಕ್ತರ ಮನಸ್ಸಿಗೆ ತಂಪನ್ನೀಯುತ್ತವೆ.
ಈಗ ಲಭ್ಯವಿರುವ ದಾಖಲೆಗಳ ಪ್ರಕಾರ ಶ್ರೀ ನಂಜುಂಡಸ್ವಾಮಿಗಳು (೧೭೮೪-೧೮೨೦) ರುದ್ರಸ್ವಾಮಿಗಳು (೧೮೨೦-೧೮೫೩) ಸಿದ್ಧಲಿಂಗ ಸ್ವಾಮಿಗಳು (೧೮೫೩-೧೯೦೧) ಈ ಅವಧಿಯಲ್ಲಿ ಉತ್ತರ ಕರ್ನಾಟಕದ ಮುಪ್ಪಿನ ಸ್ವಾಮಿಗಳು, ಅಟವೀ ಸ್ವಾಮಿಗಳು ಸಿದ್ಧಗಂಗಾ ಕ್ಷೇತ್ರದಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನೆಲೆನಿಂತು, ದಾಸೋಹಾದಿ ಧಾರ್ಮಿಕ ಸೇವಾ ಕಾರ್ಯಗಳಿಗೆ ಚಾಲನೆ ನೀಡಿದರೆಂದು ತಿಳಿದುಬರುತ್ತದೆ. ೧೯೦೧ರ ನಂತರ ಪಟ್ಟಕ್ಕೆ ಬಂದ ಉದ್ಧಾನ ಶಿವಯೋಗಿಗಳವರು, ಲೋಕ ಕಲ್ಯಾಣ ಪರವಾದ ಸೇವಾಕಾರ್ಯಗಳನ್ನು ಮುಂದುವರಿಸಿದರು. ಶ್ರೀ ಕ್ಷೇತ್ರದಲ್ಲಿ ಸಿದ್ಧಲಿಂಗೇಶ್ವರ ಜಾತ್ರೆಯನ್ನು ೧೯೦೯-೧೦ರಲ್ಲಿ ಪ್ರಾರಂಭಿಸಿ, ಧಾರ್ಮಿಕ, ಸಾಂಸ್ಕೃತಿಕ ಮತ್ತು ಜನಪದರಿಗೆ ಪ್ರೋತ್ಸಾಹ ನೀಡಿದರು. ಅನ್ನದಾಸೋಹದೊಂದಿಗೆ ಜ್ಞಾನದಾಸೋಹಕ್ಕೆ ಆದ್ಯತೆ ನೀಡಿದರು. ಶ್ರೀ ಮಠದ ಸಂಸ್ಕೃತ ಪಾಠಶಾಲೆಯಲ್ಲಿ ಎಲ್ಲ ಜಾತಿ, ವರ್ಗದ ಜನರಿಗೂ ಸಂಸ್ಕೃತ ಅಧ್ಯಯನಕ್ಕೆ ಅವಕಾಶ ಕಲ್ಪಿಸಿದರು. ೧೦ ದಿನಗಳ ಪರ್ಯಂತ ನಡೆಯುವ ಸಿದ್ಧಗಂಗಾ ಜಾತ್ರೆ ಹಳೆ ಮೈಸೂರಿನ ಉದ್ದಗಲಕ್ಕೂ ಪ್ರಸಿದ್ಧವಾಗಿದೆ.
ಕಾಯಕ
ಭಾರತೀಯ ಸಂಸ್ಕೃತಿಯ ಜೀವಾಳವಾದ ಶರಣ ಸಂಸ್ಕೃತಿಯನ್ನು ಸ್ವತಃ ತಮ್ಮ ನಡೆ ನುಡಿ ಚಿಂತನೆಗಳಲ್ಲಿ ಅಳವಡಿಸಿಕೊಂಡಿರುವ ಶ್ರೀ ಶಿವಕುಮಾರಸ್ವಾಮಿಗಳು, ಶಿಸ್ತು, ಸಂಯಮ, ಕಾಯಕ, ಸದ್ಭಾವನೆ, ಸಮತಾಭಾವಗಳನ್ನು ವಿದ್ಯಾರ್ಥಿಗಳಲ್ಲಿ ತುಂಬಿ ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹಾಮಣಿಹದಲ್ಲಿ ತೊಡಗಿದ್ದಾರೆ. ಶ್ರೀಗಳ ಪ್ರಕಾರ, ಮಠವೆಂದರೆ ಕಲ್ಲಿನ ಕಟ್ಟಡಗಳಲ್ಲ, ಆಡಂಬರದ, ವೈಭವದ ಜೀವನಕ್ರಮವಲ್ಲ, ಬೆಳ್ಳಿ ಸಿಂಹಾಸನ, ಬೆಳ್ಳಿ ಪಲ್ಲಕ್ಕಿಗಳಲ್ಲ ಸರಳವಾದ ಜೀವನ ನಡೆಸುತ್ತಾ ಶರಣ ತತ್ವ ಪ್ರಸಾರ ಮತ್ತು ಶರಣರ ಬದುಕು ಬಾಳುವುದು. ಮಠದಿಂದ ಘಟವಲ್ಲ, ಘಟದಿಂದ ಮಠ ಎನ್ನುವ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಶ್ರೀ ಶಿವಕುಮಾರ ಸ್ವಾಮಿಗಳು. ನಿಶ್ಚಿತ ಜ್ಞಾನ, ಉಜ್ವಲ ವೈರಾಗ್ಯ, ನಿರ್ಮಲ ಕ್ರಿಯೆ ಮುಪ್ಪರಿಗೊಂಡಿರುವ ಸರ್ವಾಂಗಲಿಂಗಿ ಶ್ರೀ ಶಿವಕುಮಾರ ಸ್ವಾಮೀಗಳು ೧೦೪ನೇ ವರ್ಷಕ್ಕೆ ಕಾಲಿಟ್ಟಿರುವುದು ನಾಡಿನ, ರಾಷ್ಟ್ರದ ಪುಣ್ಯ ಮತ್ತು ಹೆಮ್ಮೆ. ಸಕಲ ಜೀವರಾಶಿಗಳನ್ನು ಪ್ರೀತಿಸುವ, ಭಕ್ತರ ಕುರಿತು ಅಪಾರ ಅನುಕಂಪ ಹೊಂದಿರುವ ಶ್ರೀಗಳವರು ಪಂಡಿತ, ಪಾಮರರಿಬ್ಬರೂ ಏಕಪ್ರಕಾರವಾಗಿ ಮೆಚ್ಚುವ ಅಪೂರ್ವ ವಾಗ್ಮಿಗಳು. ವೈಜ್ಞಾನಿಕ ದೃಷ್ಠಿ, ಆಧ್ಯಾತ್ಮಿಕ ಔನ್ನತ್ಯ, ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಪೋಷಕರಾಗಿ ಶ್ರೀ ಶಿವಕುಮಾರ ಸ್ವಾಮಿಗಳು ಪ್ರಸಿದ್ಧರಾಗಿದ್ದಾರೆ. ಶ್ರೀಗಳ ಸಂಘಟನಾ ಶಕ್ತಿ, ವಿಷಯ ಪರಿಣತಿ ಕುಶಲತೆ, ಇಳಿವಯಸ್ಸಿನಲ್ಲೂ ಪ್ರಖರವಾಗಿಸಿರುವ ವಿಚಾರಶಕ್ತಿ ಅನನ್ಯವಾದವು. ಪ್ರತಿದಿವೂ, ಶ್ರೀಮಠಕ್ಕೆ ಬರುವ ಸಹಸ್ರಾರು ಭಕ್ತರ ದುಃಖ ದುಮ್ಮಾನಗಳನ್ನು ಕೇಳಿ ಸೂಚಿಸಿದ ಪರಿಹಾರಗಳು ವ್ಯಾಜ್ಯಗಳ ತೀರ್ಮಾನಗಳು ಸರ್ವಮಾನ್ಯವಾಗಿದೆ. ದಾಸೋಹ, ವಿದ್ಯಾರ್ಥಿನಿಲಯ, ನೂರಾರು ಶಾಲಾಕಾಲೇಜುಗಳ ಆಡಳಿತ ಜಟಿಲ ಸಮಸ್ಯೆಗಳನ್ನು ಲೀಲಾ ಜಾಲವಾಗಿ ಬಗೆಹರಿಸುವ ಶ್ರೀಗಳು ಸದಾ ಸಮಚಿತ್ತವನ್ನು ಕಾಪಾಡಿಕೊಂಡು ಎಲ್ಲರ ಆದರ ಗೌರವಗಳಿಗೆ ಪಾತ್ರರಾಗಿದ್ದಾರೆ.
ದಿನನಿತ್ಯದ ಪೂಜೆಗಳಲ್ಲದೆ, ಜಾತ್ರಾ ಸಮಯದಲ್ಲಿ ಗೋಸಲ ಸಿದ್ಧೇಶ್ವರ ಉತ್ಸವ, ಪಾರಂಪರಿಕ ಉತ್ಸವಗಳು. ಮಹಾ ರಥೋತ್ಸವ ರುದ್ರಾಕ್ಷಿ ಮಂಟಪ ಪೂಜೆ, ಶಿವಾನುಭವ ಸಮ್ಮೇಳನ, ತೆಪ್ಪೋತ್ಸವಗಳು ನಡೆಯುತ್ತವೆ. ಶರಣ ಸಂದೇಶವನ್ನು ಜನಸಾಮಾನ್ಯರಗೆ ತಲುಪಿಸುವ ಕಾರ್ಯಕ್ರಮಗಳನ್ನು ವರ್ಷದುದ್ದಕ್ಕೂ ನಡೆಯುತ್ತಲೇ ಇರುತ್ತವೆ. ನಾಡಿನ ಹೊರನಾಡಿನ ಖ್ಯಾತ ಮಠಾಧೀಶರನ್ನು ಧರ್ಮಾಧಿಕಾರಗಳನ್ನು ಆಹ್ವಾನಿಸಿ ಅವರ ವಾಣಿಯನ್ನು ಭಕ್ತರಿಗೆ ಕೇಳಿಸುತ್ತಾರೆ. ಶರಣ ಸಂದೇಶವನ್ನು ಉಸಿರಾಗಿಸಿಕೊಂಡಿರುವ ಪೂಜ್ಯರು ತನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ವಾಣಿಯನ್ನು ಆಚರಣೆಯಲ್ಲಿ ತಂದಿದ್ದಾರೆ. ಶ್ರೀಮಠದ ಭಕ್ತರಲ್ಲಿ ಬಹುಪಾಲು ಕೃಷಿಕರು, ನೀಡುವ ದವಸ ಧಾನ್ಯಗಳಿಂದ ಶ್ರೀಮಠದ ದಾಸೋಹ ನಿರಂತರವಾಗಿ ನಡೆಯುತ್ತಾ ಬಂದಿದೆ. ಇಂತಹ ಕೃಷಿಕರ ಬದುಕಿಗೆ ನೆರವಾಗುವಂತೆ ಜಾತ್ರೆ ಸಂದರ್ಭದಲ್ಲಿ, ಶ್ರೀ ಸಿದ್ಧಲಿಂಗೇಶ್ವರ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ೧೫ ದಿನಗಳವರೆಗೆ ಏರ್ಪಡಿಸಿ, ರೈತರಿಗೆ ಉಪಯುಕ್ತವಾದ ಕೃಷಿ ಮಾಹಿತಿಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮಳಿಗೆ ತೆರೆದು ಇತ್ತೀಚಿಗೆ ಕೃಷಿ ಕ್ಷೇತ್ರದಲ್ಲಿ ಆಗಿರುವ ಹೊಸ ತಳಿ ಬೀಜ, ಗೊಬ್ಬರ, ನೈಸರ್ಗಿಕ ಕೃಷಿ, ನೀರಿನ ಸದ್ಭಳಕೆ, ಕುರಿತು ಕೃಷಿಕರಿಗೆ ಅರಿವು ಮೂಡಿಸುತ್ತಾರೆ. ವಚನ ಗಾಯನ, ಶಾಸ್ತ್ರೀಯ ಸಂಗೀತ, ಜನಪದ ನೃತ್ಯ, ಕಲೆ, ನಾಟಕಗಳನ್ನು ಜಾತ್ರೆಯುದ್ದಕ್ಕೂ ಪ್ರತಿ ದಿನ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ಪ್ರತಿ ವರ್ಷ ಮಹಾಶಿವರಾತ್ರಿ ಸಮಯದಲ್ಲಿ ೫೦ ಸಾವಿರಕ್ಕೂ ಹೆಚ್ಚು ಜನರು ಬರುತ್ತಾರೆ. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಶ್ರೀಮಠದಿಂದ ನಡೆಯುತ್ತದೆ. ೫೦ ರಿಂದ ೬೦ ಸಾವಿರ ದನಗಳು ಸೇರುತ್ತವೆ. ಇವುಗಳಿಗೆ ಮೇವು ನೀರಿನ ವ್ಯವಸ್ಥೆಯನ್ನು ಶ್ರೀಮಠ ಮಾಡುತ್ತದೆ. ಉತ್ತಮ ರಾಸುಗಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತದೆ. ಜಾತ್ರೆಗೆ ಬರುವ ದನಕರುಗಳಿಗೆ ವಿಮೆಯನ್ನು ಸಹ ಶ್ರೀ ಮಠದ ವತಿಯಿಂದ ಮಾಡಿಸಿ, ರೈತರಿಗೆ ನೆರವಾಗುತ್ತದೆ. ಇಂತಹ ಜನಸಾಮಾನ್ಯರಿಗೆ, ರೈತರಿಗೆ ಜನಕಲ್ಯಾಣ ಯೋಜನೆಗಳಿಂದ ಯಾತ್ರಾತ್ರಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದಾರೆ.
ಶ್ರೀಮಠದ ಹಳೆ ವಿದ್ಯಾರ್ಥಿ ಸಂಘ ಶ್ರೀ ಸಿದ್ಧಗಂಗಾ ಮಠದ ಎಲ್ಲ ಕಾರ್ಯಗಳಲ್ಲಿ ತನು-ಮನ ಧನದಿಂದ ಸೇವೆ ಸಲ್ಲಿಸುತ್ತಿದೆ. ಹಳೆ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಕಾಲಕಾಲಕ್ಕೆ ಆಯ್ಕೆ ಆಗುತ್ತದೆ. ಖರ್ಚು ವೆಚ್ಚ ಲೆಕ್ಕ ಪತ್ರಗಳನ್ನು ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆಯುತ್ತದೆ. ಗ್ರಾಮಾಂತರ ಕಲ್ಯಾಣ ಕಾರ್ಯಕ್ರಮಗಳನ್ನು, ಜ್ಞಾನದಾಸೋಹವನ್ನು ನಿರಂತರವಾಗಿ ನಡೆಸುತ್ತಾ ಸಕ್ರಿಯವಾಗಿದೆ. ಸುಸಂಸ್ಕೃತ ಜನಾಂಗ ನಿರ್ಮಾಣಕ್ಕೆ ಶಿಕ್ಷಣವೇ ಮೂಲ, ಶಿಕ್ಷಣವಂತ ಜನಾಂಗ ರಾಷ್ಟ್ರದ ಸಂಪತ್ತು. ಜ್ಞಾನಕ್ಕೆ ಸಮಾನವಾದುದು ಬೇರೆ ಇಲ್ಲ ಎಂದು ಮನಗಂಡಿರುವ ಪೂಜ್ಯಶ್ರೀಗಳು. ಸಿದ್ಧಗಂಗಾ ಕ್ಷೇತ್ರವನ್ನು ಶಿಕ್ಷಣ ಕೇಂದ್ರವನ್ನಾಗಿಸಲು ಸತತವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅನಕ್ಷರತೆಯಿಂದ ಹಿಂದುಳಿದ ಬಡಜನರಿಗೆ ಉಚಿತ ಶಿಕ್ಷಣ, ಉಚಿತ ದಾಸೋಹವನ್ನು ನೀಡಿ ದೀನರು, ದಲಿತರು, ಅನಾಥರು, ಹಿಂದುಳಿದ ಜನಾಂಗಗಳ, ಅನಾದರಕ್ಕೆ ಒಳಗಾದ ಶೂದ್ರರಿಗೂ, ಅಸ್ಪೃಶ್ಯರಿಗೂ ವಿದ್ಯೆಗೆ ಮುಕ್ತ ಅವಕಾಶ ಕಲ್ಪಿಸಿ, ರಾಷ್ಟ್ರದ ಗಮನ ಸೆಳೆದಿದೆ.
ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಪೂರ್ವ ಪ್ರಾಥಮಿಕ ಪಾಠಶಾಲೆ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳು, ಶಿಕ್ಷಕರ ತರಬೇತಿ ಸಂಸ್ಥೆ, ಅಂಧ ಮಕ್ಕಳ ಶಾಲೆ, ಸಂಗೀತ ಪಾಠ ಶಾಲೆ, ವಾಣಿಜ್ಯ ವಿದ್ಯಾಸಂಸ್ಥೆ ಚಿತ್ರಕಲಾ ಶಾಲೆಗಳು ನಡೆಯುತ್ತಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತ ಶಿಕ್ಷಣ, ಉಚಿತ ಊಟ, ವಸತಿ, ಬಟ್ಟೆಗಳ ಆಶ್ರಯ ಪಡೆದಿದ್ದಾರೆ. ಇಷ್ಟೊಂದು ಬೃಹತ್ ಸಂಸ್ಥೆಯನ್ನು ಉಚಿತವಾಗಿ ನಡೆಸುವ ಸಂಸ್ಥೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರದಲ್ಲೇ ಇದೊಂದೇ ಎನ್ನಬಹುದು. ಇವುಗಳೊಂದಿಗೆ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಹೆಸರಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ ನಾಡಿನ ವಿವಿಧ ಮೂಲೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಪ್ರೌಢಶಾಲೆಗಳನ್ನು, ಪದವಿ ಪೂರ್ವ ಕಾಲೇಜುಗಳನ್ನು, ಪ್ರಥಮ ದರ್ಜೆ ಕಾಲೇಜುಗಳನ್ನು ನಡೆಸುತ್ತಿದೆ. ತುಮಕೂರು ನಗರದಲ್ಲಿ ಶ್ರೀ ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯವನ್ನು ೧೯೬೩ರಷ್ಟು ಹಿಂದೆಯೇ ಸ್ಥಾಪಿಸಿ, ನಾಡಿಗೆ ಸಹಸ್ರಾರು ಎಂಜಿನಿಯರುಗಳ ಕೊಡುಗೆ ನೀಡಿದೆ. ರಾಜ್ಯದ ಬಡ ವಿದ್ಯಾರ್ಥಿಗಳಿಗೆ, ಹೊರನಾಡಿನ ವಿದ್ಯಾಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಿದ ನಾಡಿನಲ್ಲೇ ಹೆಸರಾಂತ ಸಂಸ್ಥೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಎಲ್ಲ ವರ್ಗ, ವರ್ಣದ ವಿದ್ಯಾರ್ಥಿಗಳು, ಶಿಕ್ಷಕರೂ ಸೇವೆ ಸಲ್ಲಿಸುತ್ತಿದ್ದಾರೆ. ಮಹತ್ಮಾಗಾಂಧಿಯವರ ಕಲ್ಪನೆಯ ಗ್ರಾಮ ರಾಜ್ಯ ಸಮಾಜವಾದ ಇಲ್ಲಿ ಸಾಕಾರಗೊಂಡಿದೆ. ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಶ್ರೀ ಕ್ಷೇತ್ರದ ಆವರಣ ಸದಾ ಕಾಲ ವಿದ್ಯಾರ್ಥಿಗಳಿಂದ ತುಂಬಿರುತ್ತದೆ. ಎಲ್ಲಿ ನೋಡಿದರೂ ಶಿಕ್ಷಣಾರ್ಥಿಗಳೇ ಕಂಡು ಬರುತ್ತಾರೆ. ಶ್ರೀ ಮಠದ ಪ್ರತಿಯೊಬ್ಬ ವಿದ್ಯಾರ್ಥಿಯೂ ವಾರಕ್ಕೆರಡು ದಿನ ಶ್ರಮದಾನ ಮಾಡಲೇಬೇಕೆಂಬುದು ಕಡ್ಡಾಯ ನಿಯಮ. ಶ್ರಮದಾನದಲ್ಲಿ ಶಿಕ್ಷಕರೂ, ಸಿಬ್ಬಂದಿಗಳೊಂದಿಗೆ ಪೂಜ್ಯರು ಭಾಗವಹಿಸುವುದು ಸಿದ್ಧಗಂಗಾ ಮಠದ ವಿಶೇಷ. ಎಲ್ಲರೂ ಸಮಾನರು ಎಂಬ ತತ್ವದ ಆಚರಣೆ.
ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು, ತನ್ನಂತೆ ಪರರ ಬಗೆವೊಡೆ, ಕೈಲಾಸ ಭಿನ್ನಾಣವನ್ನು ಸರ್ವಜ್ಞ ಎಂಬ ಸರ್ವಜ್ಞನ ವಚನ ಶ್ರೀ ಸಿದ್ಧಗಂಗಾ ಕ್ಷೇತ್ರದಲ್ಲಿ ಸಾಕಾರಗೊಂಡಿದೆ. ದಿನ ನಿತ್ಯ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಪೂಜ್ಯರನ್ನು ಕಂಡು, ಗದ್ದುಗೆ ದರ್ಶನ ಮಾಡಿ, ದಾಸೋಹದಲ್ಲಿ ಪ್ರಸಾದ ಸ್ವೀಕರಿಸಿ ಧನ್ಯತೆಯ ಭಾವದಿಂದ ಹಿಂದಿರುಗುತ್ತಾರೆ. ಶ್ರೀಮಠದಲ್ಲಿ ಹೊತ್ತಿದ ಒಲೆ ಆರದಿರಲಿ ಎಂಬುದು ಹಿರಿಯ ಸ್ವಾಮಿಗಳ ಆಶಯ. ವಿರಕ್ತ ಪರಂಪರೆಯ ಲಿಂಗಾಯತ ಮಠ ಎಲ್ಲ ಜಾತಿ, ಜನಾಂಗ, ಧರ್ಮದ ಜನರೂ ಒಂದೇ ಕಡೆ ಪ್ರಸಾದ ಸ್ವೀಕರಿಸುವ ಏಕ ಮಾತ್ರ ಪವಿತ್ರ ತಾಣ ಶ್ರೀ ಸಿದ್ಧಗಂಗಾ ಮಠ. ಭಕ್ತರ ಕೊಡುಗೆಯಿಂದಲೇ ಇಷ್ಟೊಂದು ಬೃಹತ್ ದಾಸೋಹ ನಡೆಸುವ ಪೂಜ್ಯರ ಕ್ರಿಯಾಶೀಲತೆಗೆ ಎಂತಹವರೂ ತಲೆಬಾಗಲೇಬೇಕು. ಶ್ರೀಮಠಕ್ಕೆ ನೀಡಿದ ಪ್ರತಿಯೊಂದು ರೂಪಾಯಿ, ದವಸಧಾನ್ಯಗಳು, ದೀನ ದಲಿತರ ಸೇವೆಗೆ, ವಿದ್ಯಾರ್ಥಿಗಳಿಗೆ ಮೀಸಲು. ಆ ಕಾರಣಕ್ಕಾಗಿ ಭಕ್ತರೂ ಆತ್ಮ ಸಂತೋಷದಿಂದ, ತೃಪ್ತಿಯಿಂದ ಶ್ರೀಮಠದ ಸೇವಾ ಕಾರ್ಯಗಳಿಗೆ ಕೊಡುಗೈ ದಾನ ನೀಡುತ್ತಾರೆ. ಇಲ್ಲಿಗೆ ನೀಡುವ ದಾನ, ಕಾಣಿಕೆಗಳು ಸದ್ಬಳಕೆಯಾಗುತ್ತದೆ ಎಂಬುದು ದಾನಿಗಳಿಗೆ ತೃಪ್ತಿ ತಂದಿದೆ. ೧೯೫೪ರಲ್ಲಿ ಆರಂಭಿಸಲಾಯಿತು. ಈ ಪತ್ರಿಕೆಯನ್ನು ೧೯೭೫ರಿಂದ ಮಾಸ ಪತ್ರಿಕೆಯನ್ನಾಗಿ ಪ್ರಕಟಿಸುತ್ತಾ ಬಂದಿದೆ. ಶ್ರೀಮಠ ಸಮಾರಂಭಗಳು, ಕಾರ್ಯಚಟುವಟಿಕೆಗಳ ವರದಿಯೊಂದಿಗಳೊಂದಿಗೆ ಶರಣರ ತತ್ವ, ಸಂದೇಶಗಳನ್ನು ಹಿರಿಯ ವಿದ್ವಾಂಸರಿಂದ ಬರೆಸಿ, ಮೌಲಿಕ ಲೇಖನಗಳನ್ನು ಪ್ರಕಟಿಸುತ್ತಿದೆ. ಸುಮಾರು ಹತ್ತು ಸಾವಿರ ಚಂದಾದಾರರಿರುವ ಧಾರ್ಮಿಕ, ವೈಚಾರಿಕ ಮಾಸಿಕವಾಗಿ ಪ್ರಸಿದ್ಧವಾಗಿದೆ. ಭಕ್ತರ ಆಧ್ಯಾತ್ಮಕ ಹಸಿವನ್ನು ಪೂರೈಸುವ ಪತ್ರಿಕೆಯಾಗಿ ರೂಪುಗೊಂಡಿದೆ.
ಶ್ರೀ ಸಿದ್ಧಗಂಗಾ ಮಠವೊಂದು ಬಸವ ತತ್ವದ ಪ್ರಯೋಗ ಶಾಲೆ. ಶ್ರೀ ಮಠಕ್ಕೆ ಹೆಚ್ಚಿನ ಆಸ್ತಿ ಇಲ್ಲ ಆದಾಯ ಮೂಲವೂ ಇಲ್ಲ. ಭಕ್ತರೇ ಶ್ರೀಮಠದ ಆಸ್ತಿ. ಅವರು ನೀಡುವ ಕಾಣಿಕೆ, ದವಸ-ಧಾನ್ಯಗಳೇ ಆದಾಯ ಮೂಲಗಳು. ಮಹಾಜನರ ಉದಾರ ಕೊಡುಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಸಹಾಯ ಧನಗಳೇ ಶ್ರೀ ಸಿದ್ಧಗಂಗಾ ಮಠದ ಸಂಪನ್ಮೂಲಗಳು. ದೀನದಲಿತರ ಸೇವೆಗೆ ಮೀಸಲಾಗಿರುವ ಶ್ರೀ ಮಠದಲ್ಲಿ ಯಾವುದೇ ದುಂದು ವೆಚ್ಚಗಳಿಲ್ಲ. ಆಡಂಬರ, ವೈಭವಗಳಿಗೂ ಸ್ಥಾನವಿಲ್ಲ. ಭಕ್ತರು ನೀಡುವ ಪ್ರತಿ ಪೈಸೆಯೂ ದಾಸೋಹಕ್ಕೆ ಮೀಸಲು. ಬಡ, ಹಿಂದುಳಿದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ, ಸಮಾಜದಲ್ಲಿ ತಲೆ ಎತ್ತಿ ಸ್ವಾವಲಂಬಿಯಾಗಿ ಬಾಳುವ ವಿದ್ಯೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಅವಕಾಶ. ಲೇಖನ, ಭಾಷಣ, ಕವನ ರಚನೆ, ವಾಚನ, ವಚನ ಕಂಠಪಾಠ ಸ್ಪರ್ಧೆಗಳು. ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದು. ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅರಳಿಸುವ ಕಾರ್ಯ ನಿರಂತರ. ಈ ದಿಕ್ಕಿನಲ್ಲಿ ಶಿಕ್ಷಕರ, ಸಿಬ್ಬಂದಿಗಳ ವಿದ್ಯಾರ್ಥಿಗಳಿಗೆ ನಾಟಕ ಕಮ್ಮಟ, ಕಲಾಸೇವೆಯಲ್ಲಿ ಪ್ರಕಾರಗಳಲ್ಲಿ ತರಬೇತಿ ನೀಡಿದ್ದಾರೆ.
ಶ್ರೀ ಸಿದ್ಧಲಿಂಗೇಶ್ವರ ನಾಟಕ ಮಂಡಳಿಯ ಜಗಜ್ಯೋತಿ ಬಸವೇಶ್ವರ ನಾಟಕ ೬೦೦ ಕ್ಕೂ ಹೆಚ್ಚು ಪ್ರದರ್ಶನ ನೀಡಿ ಜನ ಮನ್ನಣೆ ಪಡೆದಿದೆ.
ಶ್ರೀ ಮಠದ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಮತ್ತು ಶ್ರೀ ಸಿದ್ಧಗಂಗಾ ಪ್ರಕಾಶನ ಸಂಸ್ಥೆಗಳ ಮೂಲಕ ನೂರಾರು ಗ್ರಂಥಗಳನ್ನು ಪ್ರಕಟಿಸುತ್ತಾ ಬಂದಿದೆ. ಧಾರ್ಮಿಕ, ಆಧ್ಯಾತ್ಮಕ, ಸಾಮಾಜಿಕ, ಶೈಕ್ಷಣಿಕ ಗ್ರಂಥಗಳ ಜೊತೆಗೆ ಶರಣರ ಜೀವನ, ಶರಣ ಕ್ಷೇತ್ರಗಳ ಪರಿಚಯ ಗ್ರಂಥಗಳನ್ನು ವಚನ ಸಾಹಿತ್ಯ ಕುರಿತ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿಗಳಾದ ಶ್ರೀ ತಿಪ್ಪೇರುದ್ರಸ್ವಾಮಿ ಅವರ ಕರ್ತಾರನ ಕಮ್ಮಟ ಬೃಹತ್ ಗ್ರಂಥವನ್ನು ಪ್ರಕಟಿಸಿ, ಸುಲಭ ಬೆಲೆಗೆ ಮಾರಾಟ ಮಾಡಿದೆ. ಈ ಕೃತಿ ಹಲವಾರು ಮುದ್ರಣಗಳನ್ನು ಕಂಡು ಜನಪ್ರಿಯವಾಗಿದೆ. ವಚನ ಗಂಗಾ, ವಚನ ಬಿಲ್ವ, ದಾಸೋಹ ಸಿರಿ ಅಭಿನಂದನ ಗ್ರಂಥ ಪ್ರಕಟಿಸಿದೆ. ಶ್ರೀ ಬಸವೇಶ್ವರರು ಮತ್ತು ಅವರ ಸಮಕಾಲೀನವರು ಎಂಬ ಬೃಹತ್ ಗ್ರಂಥವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಪ್ರಕಟಿಸಿದೆ. ಕುಸುಮಾಂಜಲಿ, ಕರ್ಮಯೋಗಿ ಸಿದ್ಧರಾಮ, ಉದ್ಧಾನ ಶಿವಯೋಗಿ ಮುಂತಾದ ಗ್ರಂಥಗಳು ಶ್ರೀ ಮಠದಿಂದ ಪ್ರಕಟವಾಗಿದೆ.
೧೯೭೯ರಿಂದಲೂ ಶ್ರೀ ಸಿದ್ಧಗಂಗಾ ಮಠದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿವರ್ಷ ಬಸವ ಜಯಂತಿ ಉತ್ಸವವನ್ನು ಆಚರಿಸುತ್ತಾ ಬಂದಿದೆ. ಬಸವಣ್ಣನವರ ಭಾವಚಿತ್ರ ಮೆರವಣಿಗೆ, ವಚನೋತ್ಸವ, ವ್ಯಕ್ತಿತ್ವ ವಿಕಸನ, ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳಲ್ಲಿ ಬಸವತತ್ವ ಕುರಿತು ಆಸಕ್ತಿ ಮೂಡಿಸಿ ಸತ್ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಶರಣ ತತ್ವ, ವಚನ ಸಾಹಿತ್ಯಕ್ಕಾಗಿ ದುಡಿದ ಮಹನೀಯರನ್ನು ವಿದ್ವಾಂಸರನ್ನು ಶ್ರೀಮಠಕ್ಕೆ ಬರಮಾಡಿಕೊಂಡು ಅವರಿಂದ ಉಪನ್ಯಾಸ ಏರ್ಪಡಿಸಿ, ಸನ್ಮಾನ ಗೌರವ ಪ್ರಶಸ್ತಿಗಳನ್ನು ನೀಡಿದ್ದಾರೆ. ವಚನ ಗಾಯನ ಏರ್ಪಡಿಸಿ ಸಂಗೀತ ಸುಧೆ ಹರಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಸವತತ್ವ ಪ್ರಚಾರ, ಕಾಯಕ, ದಾಸೋಹ ಮೂಲಕ ಅಸ್ಪೃಶ್ಯತೆ ನಿವಾರಣೆ, ಮಾನವೀಯತೆ, ವಿಚಾರವಂತಿಕೆಯ ಜಾಗೃತಿ ಮೂಡಿಸುತ್ತಿದ್ದಾರೆ.
ಶ್ರೀ ಸಿದ್ಧಗಂಗಾ ಕ್ಷೇತ್ರ ವರ್ಷದುದ್ದಕ್ಕೂ ಧಾರ್ಮಿಕ, ಶೈಕ್ಷಣಿಕ, ಕ್ರೀಡಾ ಶಿಬಿರಗಳು, ಸಮ್ಮೇಳನಗಳು, ವಿಚಾರ ಸಂಕೀರ್ಣಗಳು ನಡೆಯುತ್ತಲೇ ಇರುತ್ತವೆ. ೧೯೮೯ರಿಂದ ನಿರಂತರವಾಗಿ ಶರಣಮೇಳಗಳನ್ನು ನಡೆಸಿಕೊಂಡು ಬಂದಿವೆ. ಪ್ರತಿವರ್ಷ ಸಂಕ್ರಾಂತಿಯಿಂದ ಉದ್ಧಾನ ಶಿವಯೋಗಿಗಳ ಪುಣ್ಯಸ್ಮರಣೆಯನ್ನು ಆಚರಿಸುತ್ತಾ ಬಂದಿದ್ದಾರೆ. ಅನುಭಾವಿಗಳು, ಮಠಾಧೀಶರು, ವಿದ್ವಾಂಸರು ಈ ಸಮಾರಂಭದಲ್ಲಿ ಭಾಗವಹಿಸಿ ಬಸವಾದಿ ಶರಣ ಜೀವನ ಸಂದೇಶಗಳ ಉಪನ್ಯಾಸ ನೀಡುತ್ತಾ ಬಂದಿದ್ದಾರೆ. ಶಿಕ್ಷಣ ದಾಸೋಹ, ಜ್ಞಾನದಾಸೋಹ, ಪ್ರಸಾದ ದಾಸೋಹ ಮೂರು ಮುಪ್ಪರಿಗೊಂಡಿರುವ ಕ್ಷೇತ್ರವೆಂದರೆ ಶ್ರೀ ಸಿದ್ಧಗಂಗಾ ಕ್ಷೇತ್ರ. ಭಾಗವಹಿಸುವ ಎಲ್ಲರಿಗೂ ವಸತಿ, ಪ್ರಸಾದ ವ್ಯವಸ್ಥೆಗಳನ್ನು ಶ್ರೀಮಠ ಏರ್ಪಡಿಸುತ್ತದೆ. ೧೯೬೩ರಲಿ ೪೪ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರೊ.ರಂ.ಶ್ರೀ ಮುಗಳಿ ಅವರ ಅಧ್ಯಕ್ಷತೆಯಲ್ಲಿ ಸಿದ್ಧಗಂಗಾ ಕ್ಷೇತ್ರದಲ್ಲಿ ನಡೆಯಿತು. ನಾಡಿನ ಎಲ್ಲ ಕಡೆಗಳಿಂದ ಬಂದ ಸಾಹಿತ್ಯ ಪ್ರಿಯರು ಶ್ರೀಕ್ಷೇತ್ರ ಸೇವೆಯನ್ನು ಹೃದಯ ತುಂಬಿ ಪ್ರಶಂಸಿಸಿದರು. ೧೯೯೭ರಲ್ಲಿ ಶಿವಕುಮಾರ ಸ್ವಾಮಿಗಳಿಗೆ ೯೦ ವರ್ಷ ತುಂಬಿದ ಸಂದರ್ಭದಲ್ಲಿ ಭಕ್ತರು ಗುರುವಂದನ ಸಮಾರಂಭ ಏರ್ಪಡಿಸಿ ಗೌರವಿಸಿದರು. ಲಕ್ಷಾಂತರ ಭಕ್ತರು ದಾಸೋಹ ಸಿರಿ ಎಂಬ ಬೃಹತ್ ಗ್ರಂಥ ಅರ್ಪಿಸಿ ಜನ್ಮ ದಿನ ಆಚರಣೆಗೆ ಸೇರಿ ತಮ್ಮ ಭಕ್ತಿ, ಗೌರವ ತೋರಿದ್ದರು. ಅಂದಿನಿಂದ ಪ್ರತಿವರ್ಷವೂ ಪೂಜ್ಯರ ಜನ್ಮ ದಿನಾಚರಣೆಯನ್ನು ಶ್ರೀ ಕ್ಷೇತ್ರದಲ್ಲಿ ಮತ್ತು ನಾಡಿನ ಎಲ್ಲ ಭಾಗಗಳಲ್ಲಿ ಗುರುವಂದನೆ ಸಮಾರಂಭವಾಗಿ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಈ ಸಮಾರಂಭಗಳಲ್ಲಿ ರಾಷ್ಟ್ರಪತಿಗಳು, ರಾಜ್ಯಪಾಲರು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಎಲ್ಲ ಧರ್ಮದ ಧರ್ಮಾಧಿಕಾರಗಳೂ ಭಾಗವಹಿಸುತ್ತಾರೆ. ನ್ಯಾಯಮೂರ್ತಿಗಳ ಹೆಸರಾಂತ ವೈದ್ಯರು, ಶಿಕ್ಷಣವೆತ್ತರನ್ನು ಗುರುತಿಸಿ ಗೌರವಿಸಲಾಗುತ್ತಿದೆ.
೧೯೩೦ರಲ್ಲಿ ಶ್ರೀ ಸಿದ್ಧಗಂಗಾ ಮಠದ ಅಧಿಕಾರ ವಹಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ೭೭ ವರ್ಷಗಳಿಂದ ಶ್ರೀ ಕ್ಷೇತ್ರವನ್ನು ಬಹುಮುಖವಾಗಿ ವಿಸ್ತರಿಸಿದ್ದಾರೆ. ದಾಸೋಹಕ್ಕೆ ಮತ್ತೊಂದು ಹೆಸರು ಶ್ರೀ ಸಿದ್ಧಗಂಗಾ ಮಠ ಶ್ರೀ ಶಿವಕುಮಾರ ಸ್ವಾಮಿಗಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಶ್ರೀ ಗಳ ಮಾತೃ ಹೃದಯ, ದೀನರು, ದಲಿತರು, ಬಡವರ ಬಗ್ಗೆ ಸದಾ ಮಿಡಿಯುತ್ತಿರುತ್ತದೆ. ೧೯೭೨ರಲ್ಲಿ ಶ್ರೀ ಶಿವಕುಮಾರ ಸ್ವಾಮಿಗಳ ರಜತಮಹೋತ್ಸವದಲ್ಲಿ ಅಂದಿನ ರಾಷ್ಟ್ರಪತಿ ಶ್ರೀ ನೀಲಂ ಸಂಜೀವರೆಡ್ಡಿ ಅವರು ಭಾಗವಹಿಸಿದ್ದರು. ಪೂಜ್ಯರಿಗೆ ಬೃಹತ್ ಗ್ರಂಥ ಸಿದ್ಧಗಂಗಾ ಶ್ರೀ ಅರ್ಪಿಸಲಾಯಿತು. ೨೦೦೬ರಲ್ಲಿ ೯೯ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ೨೦೦೬ರಿಂದ ವರ್ಷವಿಡೀ ನಾಡಿನ ಎಲ್ಲ ಭಾಗಗಳಲ್ಲಿ ಗುರುವಂದನಾ ಕಾರ್ಯಕ್ರಮಗಳು ಪ್ರತಿದಿನವೂ ಎಂಬಂತೆ ನಡೆಯುತ್ತದೆ.
ಎನಿತು ಜನ್ಮದಲ್ಲಿ, ಎನಿತು ಜೀವರಿಗೆ ಎನಿತು ನಾವು ಋಣಿಯೋ ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ ಎಂದಿದ್ದಾರೆ ಡಾ.ಜಿ.ಎಸ್.ಎಸ್. ಶ್ರೀ ಸಿದ್ಧಗಂಗಾ ಮಠ ತಮಗೆ ೩ ವರ್ಷ (೧೯೪೧-೧೯೪೪) ಆಶ್ರಯ ನೀಡಿದ್ದನ್ನು ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರು ನೆನೆಯುತ್ತಾರೆ. ಅಂದು ಶ್ರೀ ಶಿವಕುಮಾರ ಸ್ವಾಮಿಗಳು ಆಶ್ರಯ ನೀಡದೇ ಹೋಗಿದ್ದರೆ ನನ್ನ ಬದುಕು ಏನಾಗುತ್ತಿತ್ತೋ ಹೇಳಲು ಬಾರದು ಎಂದಿದ್ದಾರೆ. ಆ ದಿನಗಳಲ್ಲೇ ಸುಮಾರು ನಾಲ್ಕು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿದ್ಧಗಂಗಾ ಮಠದಲ್ಲಿ ವಸತಿ ದಾಸೋಹ ಪಡೆದಿದ್ದರು ಎಂದು ಡಾ.ಜಿ.ಎಸ್.ಎಸ್. ದಾಖಲಿಸಿದ್ದಾರೆ. ಭಕ್ತಿ ಎಂಬುದ ಮಾಡಬಾರದು, ಅದು ಹೋಗುತ್ತಲೂ ಕೊಯ್ಯುತ್ತದೆ, ಬರುತ್ತಲೂ ಕೊಯ್ಯುತ್ತದೆ, ಕಾವಿಯೂ ಅಷ್ಟೇ, ಲೋಕದ ಕಣ್ಣಿಗೆ ಪವಿತ್ರವೆಂಬಂತೆ ಕಂಡು ಬಂದರೆ ಸಾಲದು, ತನ್ನ ಒಳಗಣ್ಣಿಗೆ ತಾನೆಷ್ಟು ಪವಿತ್ರ, ಪರಿಶುದ್ಧ ಎಂಬುದನ್ನು ತನಗೆ ತಾನೇ ಒರೆಗೆ ಹಚ್ಚಿ ನೋಡಿಕೊಳ್ಳಬೇಕು, ಜನಮೆಚ್ಚಿ ನಡೆಕೊಂಡರೇನುಂಟು ಜಗದೊಳಗೆ ಮನಮೆಚ್ಚಿ ನಡಕೊಂಬುದೆ ಚಂದವು ಎನ್ನುತ್ತಾರೆ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು. ಸ್ವಾಮಿಗಳಾಗುವವರು ಕಾರುಣ್ಯದ ಕಾರಂಜಿಯಾಗಬೇಕು. ಮಗುವಿನ ಮುಗ್ಧ ಮನಸ್ಸಿನೊಂದಿಗೆ, ಪ್ರಬುದ್ಧ ವಿಚಾರವಂತರೂ, ಶುದ್ಧರೂ ಆಗಿರಬೇಕು.
ಶ್ರೀ ಗಳವರದು ಶುದ್ಧಾಂತಃ ಕರಣ ನಿಜವನರಿದ ನಿಶ್ಚಿಂತ, ಮರಣವಗೆಲಿದ ಮಹಾಂತ, ನೂರು ವರ್ಷ ಜೀವಿಸಿ ಸಾರ್ಥಕ ಸೇವೆಯಲಿ ತೊಡಗಿರುವ ಶತಾಯುಷಿ, ಬಸವ ತತ್ವವೇ ಮೈವೆತ್ತಂತಿರುವ ಪುಣ್ಯಪುರುಷ, ಇಂತಹ ಮಹಾಮಹಿಮರನ್ನು ಕಾಣುವ ಭಾಗ್ಯ, ಅವರ ಜೀವಿತದಲ್ಲಿ ನಾವೂ ಇದ್ದೆವು ಎಂಬುದೇ ಒಂದು ಮಹಾ ಭಾಗ್ಯ.

ಜಯದೇವಪ್ಪ ಜೈನಕೇರಿ
ನಂ.೮೭, ಶಾಂತಲಾ, ಕುವೆಂಪು ರಸ್ತೆ, ಶಿವಮೊಗ್ಗ.
ಕರವೇ ನಲ್ನುಡಿ ಯಲ್ಲಿ ಪ್ರಕಟವಾಗಿದೆ 

ನಡೆದಾಡು ದೇವರಿಗೆ ಜನುಮದಿನದ ನಮನ


ನಡೆದಾಡು ದೇವರಿಗೆ  ಜನುಮದಿನದ ನಮನ 
ಸಿದ್ದಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮಿ ರವರ ೧೦೪ನೇ ಜನ್ಮದಿನ ಇಂದು  


ಸಮಗ್ರ ಸುದ್ದಿ ವೆಬ್ ಸೈಟ್ ನಲ್ಲಿ



ನಿಮ್ಮ  ನಂದಿಯ ೨ನೇ ಪ್ರಯತ್ನ 
 ಬೆಳಗಾವಿಯಲ್ಲಿ ನಡೆಯಲಿರುವ 
 ವಿಶ್ವ ಕನ್ನಡ ಸಮ್ಮೇಳನ-೨೦೧೧  ಸಮಗ್ರ ಸುದ್ದಿ 
ವೆಬ್ ಸೈಟ್ ನಲ್ಲಿ

ವಿಶ್ವ ಕನ್ನಡ ಸಮ್ಮೇಳನ ೨೦೧೧

ವಿಶ್ವ ಕನ್ನಡ ಸಮ್ಮೇಳನ ೨೦೧೧ ಬೆಳಗಾವಿ
ಸಮಗ್ರ ಮಾಹಿತಿ ವೆಬ್ ಸೈಟ್  ನಲ್ಲಿ

ಸಂಪಾದಕೀಯ: ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...

ಸಂಪಾದಕೀಯ: ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...: "ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಕನ್ನಡಪ್ರಭ ನಂ.೧ ಪತ್ರಿಕೆಯಾಗಬಹುದೇ ಎಂಬ ಪ್ರಶ್ನೆ ಇಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಅಗ್ದಿ ಜೋರಾಗಿಯೇ ಮತ..."

ಬಿಎಸ್ ಯಡಿಯೂರಪ್ಪ ಆಸ್ತಿ?


ಭೂಹಗರಣಗಳ ಆರೋಪಗಳನ್ನು ಹೊತ್ತಿರುವ ಮಾನ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಆಸ್ತಿ ವಿವರಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬಹಿರಂಗಪಡಿಸಲಾಗಿದೆ.

ಭೂಹಗರಣದಿಂದ ಸಿಎಂ ಕುಟುಂಬಕ್ಕೆ ಸುಮಾರು 100 ಕೋಟಿ ರು.ಗೂ ಅಧಿಕ ಲಾಭವಾಗಿದೆ ಎಂದು ಪ್ರತಿಪಕ್ಷಗಳು ಆರೋಪ ಹೊರೆಸಿದ್ದವು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ಜನವರಿ 31, 2011ಕ್ಕೆ ಸಲ್ಲುವಂತೆ ಬ್ಯಾಂಕ್ ಠೇವಣಿ, ಚಿರಾಸ್ತಿ, ಚರಾಸ್ತಿ, ಷೇರುಗಳು ಮುಂತಾದ ಸಂಪೂರ್ಣ ವಿವರಗಳನ್ನು ಮಾಧ್ಯಮ ಪ್ರತಿನಿಧಿಗಳ ಮುಂದೆ ಬಿಚ್ಚಿಟ್ಟರು. ಆಸ್ತಿ ವಿವರದ ನಕಲು ಪ್ರತಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೂ ಸಲ್ಲಿಸಿದ್ದಾರೆ. 

2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ಒಟ್ಟು ಮೌಲ್ಯ 1.82 ಕೋಟಿ ರು ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ನಂತರ ಲೋಕಾಯುಕ್ತರಿಗೆ ಸಲ್ಲಿಸಿದ ವಾರ್ಷಿಕ ವಿವರಗಳಲ್ಲಿ ಆಸ್ತಿ ಮೌಲ್ಯ 5.38 ಕೋಟಿ ರು ಎಂದು ಬಹಿರಂಗಪಡಿಸಿದ್ದರು. ಆದರೆ, ಇಂದು ಮಾಧ್ಯಮಗಳ ಮುಂದೆ ಸಲ್ಲಿಸಿದ ಪ್ರತಿಯಲ್ಲಿ ಒಟ್ಟು ಮೌಲ್ಯದ ವಿವರಗಳಿರಲಿಲ್ಲ. ಅಲ್ಲದೆ, ನನಗೆ ನನ್ನ ಮಕ್ಕಳಿಗೆ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಇಲ್ಲ ಎಂದು ವಿಶೇಷವಾಗಿ ಯಡಿಯೂರಪ್ಪ ಅವರು ಸೂಚಿಸಿದ್ದರು.

ಒಟ್ಟು ಮೌಲ್ಯ ತಿಳಿಯದಿದ್ದರೂ ಅಸಮಗ್ರವಾದ ಸಿಎಂ ಆಸಿ ವಿವರ ಇಲ್ಲಿದೆ:

ಮನೆ ಹಾಗೂ ನಿವೇಶನಗಳು: ಶಿಕಾರಿಪುರದಲ್ಲಿ ಎರಡು ಮನೆಗಳಿವೆ. ಒಂದು ಮನೆ ಹೆಂಡತಿ ಮನೆ ಕಡೆಯಿಂದ ಬಂದದ್ದು, 2004ರಲ್ಲಿ ಶಿಕಾರಿಪುರದಲ್ಲಿ ಮತ್ತೊಂದು ಮನೆ ಖರೀದಿ.

* ಬೆಂಗಳೂರಿನ ಆರ್ ಎಂವಿ ಬಡಾವಣೆಯಲ್ಲಿ ಸಿಎಂ ನಿವಾಸವಿದೆ.
* ಬೆಂಗಳೂರಿನಲ್ಲಿ 65 X 85 ಬಿಡಿಎ ನಿವೇಶನ.
* ತಿರುಮಲಾಪುರದಲ್ಲಿ 5.02 ಎಕರೆ ಕೃಷಿ ಭೂಮಿ.
* ಚನ್ನಹಳ್ಳಿ 4.10 ಎಕರೆ ಕೃಷಿ ಭೂಮಿ.
* ಶಿರಾಳಕೊಪ್ಪದಲ್ಲಿ ಕೈಗಾರಿಕಾ ಉದ್ದೇಶದಿಂದ 9.12 ಎಕರೆ ಭೂಮಿ ಖರೀದಿ.

ಬ್ಯಾಂಕ್ ಠೇವಣಿ, ಷೇರುಗಳು: 
* ಶಿಕಾರಿಪುರದ ಕೆನರಾ ಬ್ಯಾಂಕ್ ನಲ್ಲಿ 2,19,636 ರು ಹಣ.
* ಶಿವ ಸಹಕಾರಿ ಬ್ಯಾಂಕ್ ನಲ್ಲಿ 20 ಸಾವಿರ ಠೇವಣಿ.
* ಅಪೆಕ್ಸ್ ಬ್ಯಾಂಕ್ ವಿಧಾನಸೌಧ ಶಾಖೆಯಲ್ಲಿ 17 ಲಕ್ಷ 25ಸಾವಿರ 131 ರುಪಾಯಿಗಳು
* ಸಾಫ್ಟ್ ವೇರ್ ಟೆಕ್ ಗ್ರೂಪ್ ನಲ್ಲಿ 100 ಷೇರುಗಳು
* ಜೆನಿತ್ ಇನ್ಫೋಟೆಕ್ ನಲ್ಲಿ 50 ಷೇರುಗಳು
* ಖೇತಾನ್ ಲಿಮಿಟೆಡ್ ನಲ್ಲಿ 70 ಷೇರುಗಳು
* ಶಿಕಾರಿಪುರ ಅರ್ಬನ್ ಬ್ಯಾಂಕ್ 100 ಷೇರುಗಳು

ವಿಮೆ ಹಣ, ಚಿನ್ನ ಬೆಳ್ಳಿ ಇತ್ಯಾದಿ:
* ಎಲ್ ಐಸಿ 1.72 ಲಕ್ಷ ರು.
* ಬಿಎಸ್ ಎನ್ ಎಲ್ ನಿಂದ ಪಿಂಚಣಿ ಹಣ
* 10 ಲಕ್ಷ ರು ಮೌಲ್ಯದ ಗೃಹೋಪಯೋಗಿ ವಸ್ತುಗಳು
* 76 ಕೆಜಿ ಬೆಳ್ಳಿ, 2ಕೆಜಿ 976ಗ್ರಾಂ ಬಂಗಾರ.
* ಒಂದು ಕಾಂಟೆಸ್ಸಾ ಕಾರು, ಒಂದು ಸ್ಕಾರ್ಪಿಯೋ ಕಾರು

ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ಕಾಲದಲ್ಲಿ ಬಿಜೆಪಿ ಮುಖ್ಯಮಂತ್ರಿಗಳು ಆಸ್ತಿ ವಿವರ ಬಹಿರಂಗ ಪಡಿಸುವಂತೆ ಕರೆ ನೀಡಿದ್ದರು. ಇತ್ತೀಚೆಗೆ ರಿಡಿಫ್ ಅಂತರ್ಜಾಲ ತಾಣ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಯಡಿಯೂರಪ್ಪ ನಾಲ್ಕನೇ ಸ್ಥಾನ ಪಡೆದಿದ್ದರು

ಕರ್ನಾಟಕ ರಕ್ಷಣಾ ವೇದಿಕೆಯ ಸಾರ್ಥಕ ಹತ್ತು ದಶಕದ ಒಂದು ನೋಟ

ಕರ್ನಾಟಕ ರಕ್ಷಣಾ ವೇದಿಕೆಗೆ ಈಗ ಹತ್ತು ವರ್ಷ. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸಿದ್ದನ್ನು ವಿರೋಧಿಸಿ ಕನ್ನಡ ಕಟ್ಟಾಳುಗಳು ನಡೆಸಿದ ಹೋರಾಟವೇ ಕರವೇ ಉದಯಕ್ಕೆ ಮುನ್ನುಡಿಯಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಾರ್ಥಕ ಹತ್ತು ವರ್ಷಗಳನ್ನು ಪೂರೈಸಿದ ಹೆಮ್ಮೆ ಕರ್ನಾಟಕ ರಕ್ಷಣಾ ವೇದಿಕೆಯದ್ದು.
ಹತ್ತು ವರ್ಷಗಳ ಹಿಂದೆ ಕನ್ನಡಪರ ಚಳವಳಿ ದಿಕ್ಕಿಲ್ಲದಂತಾಗಿತ್ತು. ಕನ್ನಡದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಡುವ ನೂರಾರು ಸಂಘಟನೆಗಳು ಇದ್ದವು ಎಂಬುದೇನೋ ನಿಜ. ಆದರೆ ಬಿಡಿಬಿಡಿಯಾದ ಹೋರಾಟಗಳು ಪರಿಣಾಮದ ದೃಷ್ಟಿಯಿಂದ ಸೋಲುತ್ತಿದ್ದವು. ಹೀಗಾಗಿ ಒಗ್ಗಟ್ಟಾದ ಹೋರಾಟ ಅನಿವಾರ್ಯತೆಯಿತ್ತು. ಇಂಥ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಒಕ್ಕೂಟವಾಗಿ ರೂಪುಗೊಂಡಿದ್ದು ಕರ್ನಾಟಕ ರಕ್ಷಣಾ ವೇದಿಕೆ.
ಕನ್ನಡತನವೇ ಸಿದ್ಧಾಂತ
ಕರ್ನಾಟಕ ರಕ್ಷಣಾ ವೇದಿಕೆ ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು ಎಂಬ ಘೋಷವಾಕ್ಯದೊಂದಿಗೆ ಚಳವಳಿಯ ಕಣಕ್ಕೆ ಇಳಿಯಿತು. ‘ಕನ್ನಡವಿಲ್ಲದ ಸ್ವರ್ಗ ನನಗೆ ನರಕ ಸಮಾನ, ಕನ್ನಡವಿರುವ ನರಕ ನನಗೆ ಸ್ವರ್ಗ ಸಮಾನ’ ಎಂದು ಹೇಳಿದ ಮಹಾಕವಿ ಕುವೆಂಪು ಅವರೇ ಸಂಘಟನೆಗೆ ಆದರ್ಶ ಪುರುಷ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂಬುದು ವೇದಿಕೆಯ ಪ್ರಬಲ ಘೋಷಣೆಯಾಗಿ ಮೊಳಗಿತು. ಕನ್ನಡದ ಶತ್ರುಗಳೆಲ್ಲ ನಮ್ಮ ಶತ್ರುಗಳು ಎಂಬಂತೆ ಕರವೇ ಸಮರಾಂಗಣಕ್ಕೆ ಇಳಿಯಿತು. ಅದರ ಪರಿಣಾಮವಾಗಿ ಕನ್ನಡ ಚಳವಳಿಯ ಕ್ಷೇತ್ರದಲ್ಲಿ ಹೊಸ ಅಲೆಯೇ ಸೃಷ್ಟಿಯಾಯಿತು. ಕರ್ನಾಟಕದಲ್ಲಿ ಕನ್ನಡಿಗನೇ ಅಸಹಾಯಕನಾಗಿದ್ದ ಸನ್ನಿವೇಶದಲ್ಲಿ ತಮ್ಮ ನೆಲದಲ್ಲಿ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಜೀವದ ಹಂಗು ತೊರೆದು ಹೋರಾಡಲು ವೀರ ಕನ್ನಡಿಗರ ಪಡೆಯೇ ಸೃಷ್ಟಿಯಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಟಿ.ಎ.ನಾರಾಯಣಗೌಡರು ಅಧಿಕಾರ ವಹಿಸಿಕೊಂಡ ನಂತರ ಇಡೀ ರಾಜ್ಯಾದ್ಯಂತ ಹೊಸ ಸಂಚಲನವೇ ಮೂಡಿತು. ಹಳೆ ಮೈಸೂರು ಪ್ರಾಂತ್ಯದಲ್ಲಿ ಆಗಷ್ಟೆ ಬೇರುಬಿಡುತ್ತಿದ್ದ ಸಂಘಟನೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಿದ್ದು ನಾರಾಯಣಗೌಡರು. ಅವರ ಚುಂಬಕ ವ್ಯಕ್ತಿತ್ವಕ್ಕೆ ಮನಸೋತು ನಾಡಿನ ಲಕ್ಷಾಂತರ ಕಾರ್ಯಕರ್ತರು ರಕ್ಷಣಾ ವೇದಿಕೆಯೆಡೆಗೆ ಆಕರ್ಷಿತರಾದರು. ಪರಿಣಾಮವಾಗಿ ರಾಜ್ಯದಲ್ಲಿ ಹೊಸ ಕನ್ನಡ ಶಕ್ತಿ ಉದಯವಾಯಿತು. ಕನ್ನಡಿಗರ ಹತ್ತು ಹಲವು ಸಮಸ್ಯೆಗಳಿಗೆ ಉತ್ತರಗಳು ದಕ್ಕಿದವು. ಕನ್ನಡ ವಿರೋಧಿಗಳ ಅಟ್ಟಹಾಸ ತಕ್ಕಮಟ್ಟಿಗೆ ಅಡಗಿತು. ರಾಜಧಾನಿ ಬೆಂಗಳೂರಿನಲ್ಲಿ ಪರಭಾಷಿಗರ ದೌರ್ಜನ್ಯವನ್ನು ಮಟ್ಟಹಾಕಲಾಯಿತು. ಕನ್ನಡದ ಜನತೆ ನಾರಾಯಣಗೌಡರಲ್ಲಿ ಹೊಸ ನಾಯಕನನ್ನು ಗುರುತಿಸಿತು.
ಉದ್ಯೋಗದ ಹೋರಾಟ
ಕನ್ನಡ ಚಳವಳಿ ಬಹುತೇಕ ಸಂದರ್ಭಗಳಲ್ಲಿ ಭಾವನಾತ್ಮಕ ವಿಷಯಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಬದುಕಿನ ಸಮಸ್ಯೆಗಳನ್ನು ಕೈಗೆತ್ತಿಕೊಂಡಿತು. ಕನ್ನಡಿಗರಿಗೆ ಸರ್ಕಾರಿ, ಅರೆಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ದೊರೆಯಬೇಕು ಎಂಬುದು ರಕ್ಷಣಾ ವೇದಿಕೆಯ ಪ್ರಧಾನ ಉದ್ದೇಶವಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳು, ಕಛೇರಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ತೀವ್ರ ಸ್ವರೂಪದ ಹೋರಾಟಗಳನ್ನು ಸಂಘಟಿಸಿತು.
ಕರ್ನಾಟಕದಲ್ಲಿ ಕನ್ನಡಿಗರಿಗೇ ಉದ್ಯೋಗ ದೊರೆಯದಂಥ ಸಂದರ್ಭ ಸೃಷ್ಟಿಯಾಗಿದ್ದಾಗ ಅದರ ವಿರುದ್ಧ ಕರವೇ ಸೆಟೆದು ನಿಂತಿತು. ಕರ್ನಾಟಕಕ್ಕೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಅರಸಿಕೊಂಡು ಬಂದಿದ್ದರ ಪರಿಣಾಮವಾಗಿ ಕನ್ನಡಿಗರಿಗೆ ಉದ್ಯೋಗ ದೊರೆಯಲು ಕಷ್ಟಸಾಧ್ಯವಾಯಿತು. ಈ ಅನಿಯಂತ್ರಿತ ವಲಸೆಗೆ ರಾಜಕಾರಣಿಗಳು ಪ್ರಮುಖ ಕಾರಣ. ಓಟ್‌ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ಜನಪ್ರತಿನಿಧಿಗಳು ವಲಸಿಗರನ್ನು ಓಲೈಸತೊಡಗಿದ್ದರು (ಈಗಲೂ ಓಲೈಸುತ್ತಾರೆ). ಇಂಥ ಸನ್ನಿವೇಶದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕದ ಹೊರತು ಕನ್ನಡಿಗರ ಸಮಸ್ಯೆಗಳು ಪರಿಹಾರವಾಗದು ಎಂಬುದನ್ನು ಕರ್ನಾಟಕ ರಕ್ಷಣಾ ವೇದಿಕೆ ಮನಗಂಡಿತ್ತು. ಹೀಗಾಗಿ ಉದ್ಯೋಗದ ಹೋರಾಟವನ್ನು ಕರವೇ ತನ್ನ ಬಹುಮುಖ್ಯ ಆದ್ಯತೆಯನ್ನಾಗಿ ಗುರುತಿಸಿತ್ತು. ಎಜಿ ಕಛೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದ ರೀತಿಯನ್ನು ವಿರೋಧಿಸಿ ನಡೆದದ್ದೇ ಕರ್ನಾಟಕ ರಕ್ಷಣಾ ವೇದಿಕೆಯ ಮೊದಲ ಹೋರಾಟ. ಈ ಮೊದಲ ಹೋರಾಟದಲ್ಲೇ ವೇದಿಕೆಗೆ ಜಯ ಲಭಿಸಿತು. ಕಳೆದ ಹತ್ತು ವರ್ಷಗಳಲ್ಲಿ ಇಂಥ ನೂರಾರು ಹೋರಾಟಗಳನ್ನು ವೇದಿಕೆ ಸಮರ್ಥವಾಗಿ ಮುನ್ನಡೆಸಿ ಕನ್ನಡಿಗರಿಗೆ ನ್ಯಾಯ ದೊರಕಿಸಿಕೊಟ್ಟಿದೆ.
ರೈಲ್ವೆ ಹೋರಾಟ
ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ಹೋರಾಟಗಳಲ್ಲಿ ಬಹುಮುಖ್ಯವಾದುದು ರೈಲ್ವೆ ಹೋರಾಟ. ಕಳೆದ ಆರು ದಶಕಕ್ಕೂ ಹೆಚ್ಚು ಕಾಲ ಕೇಂದ್ರದ ರೈಲ್ವೆ ಇಲಾಖೆ ಕನ್ನಡಿಗರನ್ನು ವಂಚಿಸಿಕೊಂಡೇ ಬಂದಿದೆ. ರೈಲ್ವೆ ಇಲಾಖೆಯಲ್ಲಿ ಇಷ್ಟು ವರ್ಷಗಳ ಕಾಲ ಕನ್ನಡಿಗರಿಗೆ ಆದ್ಯತೆಯ ಮೇರೆ ಉದ್ಯೋಗ ಕೊಡುವಂತಹ ವಾತಾವರಣವೇ ಇರಲಿಲ್ಲ. ಸಿ.ಕೆ.ಜಾಫರ್ ಷರೀಫ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ಕನ್ನಡಿಗರಿಗೆ ಉದ್ಯೋಗ ದೊರಕಿದ್ದನ್ನು ಹೊರತುಪಡಿಸಿದರೆ ಆರು ದಶಕಗಳಲ್ಲಿ ಇಲಾಖೆಗೆ ಕನ್ನಡಿಗರ ಸೇರ್ಪಡೆ ನಗಣ್ಯವಾಗಿತ್ತು. ಕರ್ನಾಟಕದ ರೈಲ್ವೆ ಸ್ಟೇಷನ್‌ಗಳಲ್ಲಿ ಕಾರ್ಯ ನಿರ್ವಹಿಸುವ ಸ್ಟೇಷನ್ ಮಾಸ್ಟರ್ ಹುದ್ದೆಯಿಂದ ಹಿಡಿದು ಗ್ಯಾಂಗ್‌ಮನ್ ಗಳವರೆಗೆ ಎಲ್ಲರೂ ಪರಭಾಷಿಕರೇ ಆಗಿದ್ದಾರೆ. ಅದರಲ್ಲೂ ವಿಶೇಷವಾಗಿ ತಮಿಳುನಾಡು, ಕೇರಳ ಮತ್ತಿತರ ರಾಜ್ಯಗಳಿಂದ ಬಂದವರೇ ಕರ್ನಾಟಕದಲ್ಲಿ ಉದ್ಯೋಗ ಹಿಡಿದಿದ್ದಾರೆ.
ದುರಂತವೆಂದರೆ, ಕರ್ನಾಟಕವನ್ನಾಳಿದ ಯಾವ ಸರ್ಕಾರಕ್ಕೂ, ಯಾವ ರಾಜಕೀಯ ಪಕ್ಷಕ್ಕೂ ಈ ಅನ್ಯಾಯದ ಅರಿವೇ ಇರಲಿಲ್ಲ (ಈಗಲೂ ಇಲ್ಲ). ಕರ್ನಾಟಕದಿಂದ ಸಂಸತ್ತಿಗೆ ಆರಿಸಿ ಹೋಗುವ ಜನಪ್ರತಿನಿಧಿಗಳಿಗೂ "ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ" ಎಂಬ ಕನಿಷ್ಠ ತಿಳಿವಳಿಕೆಯೂ ಇರಲಿಲ್ಲ.
ರೈಲ್ವೆಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ವಂಚನೆಯನ್ನು ಗುರುತಿಸಿದ ಟಿ.ಎ.ನಾರಾಯಣಗೌಡರು ನಿರ್ಣಾಯಕ ಹೋರಾಟಕ್ಕೆ ವೇದಿಕೆಯ ಕಾರ್ಯಕರ್ತರನ್ನು ಸಜ್ಜುಗೊಳಿಸಿದರು. ಅದರ ಪರಿಣಾಮವಾಗಿ ನಡೆದದ್ದೇ ಐತಿಹಾಸಿಕ ರೈಲ್ವೆ ಚಳವಳಿ.
ಮೊದಲ ಬಾರಿ ದೇಶದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಿಹಾರದ ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದರು. ಹಿಂದೆ ನಡೆದ ಸಂಪ್ರದಾಯಗಳ ಹಾಗೆಯೇ ಲಾಲೂ ಯಾದವ್ ಸಹ ತನ್ನ ರಾಜ್ಯದ ನಿರುದ್ಯೋಗಿ ಯುವಕರಿಗೆ ರೈಲ್ವೆಯಲ್ಲಿ ಉದ್ಯೋಗ ಕೊಡಿಸಲು ಮುಂದಾದರು. ಇದಕ್ಕಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ಕರ್ನಾಟಕ ರಾಜ್ಯವನ್ನು. ಇತರ ರಾಜ್ಯಗಳಲ್ಲಿ ಹಿಂಡುಗಟ್ಟಲೆ ಬಿಹಾರಿಗಳನ್ನು ತುಂಬಲು ಮುಂದಾದರೆ ಪ್ರತಿರೋಧ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಕರ್ನಾಟಕವೇ ಸೂಕ್ತ ಎಂಬ ಕಾರಣಕ್ಕೆ ನೀತಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ನಾಟಕದ ರೈಲ್ವೆಯಲ್ಲಿ ಸಾವಿರಾರು ಬಿಹಾರಿ ಯುವಕರಿಗೆ ಉದ್ಯೋಗ ದೊರಕಿಸಿಕೊಡಲು ಕಳ್ಳ ಮಾರ್ಗಗಳನ್ನು ಹಿಡಿದರು.
ನೈಋತ್ಯ ರೈಲ್ವೆ ವಲಯದಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನೇಮಕಾತಿ ಕಾರ್ಯ ಆರಂಭವಾಯಿತು. ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗಳಲ್ಲಿ ಏಕಕಾಲಕ್ಕೆ ಪರೀಕ್ಷೆಗಳು ಆರಂಭವಾದವು. ವಿಶೇಷವೆಂದರೆ, ಈ ಪರೀಕ್ಷೆಗಳಿಗೆ ಸಾವಿರಾರು ಬಿಹಾರಿ ಯುವಕರು ಆಗಮಿಸಿದ್ದರು. ಇವರನ್ನು ವಿಶೇಷ ರೈಲುಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಗೆ ಕರೆ ತರಲಾಗಿತ್ತು. ಇವರ ವಾಸ್ತವ್ಯ ಮತ್ತು ಊಟೋಪಚಾರದ ವ್ಯವಸ್ಥೆಗಳನ್ನು ಸಹ ಲಾಲೂ ಯಾದವ್ ಅವರ ಅಣತಿಯ ಮೇರೆಗೆ ರೈಲ್ವೆ ಇಲಾಖೆಯೇ ವಹಿಸಿಕೊಂಡಿತ್ತು. ಈ ವಿಷಯ ಟಿ.ಎ.ನಾರಾಯಣಗೌಡರಿಗೆ ಗೊತ್ತಾಗುತ್ತಿದ್ದಂತೆ ಹೋರಾಟದ ರಣಕಹಳೆಯನ್ನೇ ಮೊಳಗಿಸಿದರು.
ರೈಲ್ವೆ ಪರೀಕ್ಷೆಗಳ ನಡೆಯುತ್ತಿದ್ದ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ಪರೀಕ್ಷಾ ಕೇಂದ್ರಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ಏಕಕಾಲಕ್ಕೆ ದಾಳಿ ನಡೆಸಿದರು. ಪರೀಕ್ಷೆಗಳು ನಡೆಯದಂತೆ ತಡೆದರು. ಹೆಚ್ಚು ರಕ್ಷಣಾ ಸಿಬ್ಬಂದಿಗಳನ್ನು ಇಟ್ಟುಕೊಂಡು ಪುನಃ ಪರೀಕ್ಷೆಗಳನ್ನು ನಡೆಸಲು ಇಲಾಖೆ ಪ್ರಯತ್ನಿಸಿತು. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಈ ಎಲ್ಲಾ ಕುತಂತ್ರಗಳನ್ನು ಕರವೇ ಕಾರ್ಯಕರ್ತರು ವಿಫಲಗೊಳಿಸಿದರು. ಈ ಹೋರಾಟದ ಸಂದರ್ಭದಲ್ಲಿ ಪೊಲೀಸರ ಲಾಠಿಗೆ ಗುರಿಯಾದ ಕಾರ್ಯಕರ್ತರು ಜೀವದ ಹಂಗು ತೊರೆದು ಚಳವಳಿ ನಡೆಸಿದರು. ಎಲ್ಲೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಕನ್ನಡಿಗರ ಪ್ರತಿರೋಧದ ನಡುವೆಯೂ ಬಿಹಾರಿ ಯುವಕರನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆ ಹುದ್ದೆಗಳಿಗೆ ನೇಮಕ ಮಾಡಲು ಯತ್ನಿಸುತ್ತಿದ್ದ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತು.
ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಹಾಗೂ ಬೆಂಗಳೂರಿನ ನೈಋತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರ ಕಛೇರಿಗಳ ಮೇಲೂ ದಾಳಿಗಳು ನಡೆದವು. ಪರಿಣಾಮವಾಗಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ನಡೆಯುತ್ತಿದ್ದ ಪರೀಕ್ಷೆಗಳು ಸ್ಥಗಿತಗೊಂಡವು. ಬಿಹಾರಿ ಯುವಕರು ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗಿದರು.
ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ವಿಶೇಷ ಅರ್ಹತೆಗಳ ಅಗತ್ಯವಿಲ್ಲದೇ ಇರುವುದರಿಂದ, ಡಾ.ಸರೋಜಿನಿ ಮಹಿಷಿ ವರದಿ ಅನ್ವಯ ಈ ಹುದ್ದೆಗಳನ್ನು ಸ್ಥಳೀಯರಿಗೆ ಅರ್ಥಾತ್ ಕನ್ನಡಿಗರಿಗೆ ಕೊಡಬೇಕು ಎಂಬ ಕಾನೂನು ಇರುವುದರಿಂದ ಈ ಹುದ್ದೆಗಳಿಗೆ ಅನ್ಯ ಭಾಷಿಕರನ್ನು ನೇಮಕ ಮಾಡಬಾರದು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರಮುಖ ಬೇಡಿಕೆಯಾಗಿತ್ತು. ಈ ಹುದ್ದೆಗಳಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಇದರ ಪರಿಣಾಮವಾಗಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದ ನಿರುದ್ಯೋಗಿ ಕನ್ನಡದ ಯುವಕರು ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದು ಕಷ್ಟಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಕನ್ನಡ ಪ್ರಶ್ನೆಪತ್ರಿಕೆಗಳನ್ನು ನೀಡಬೇಕು ಎಂಬುದು ಕರವೇ ಬೇಡಿಕೆಯಾಗಿತ್ತು.
ಲಾಲೂ ಪ್ರಸಾದ್‌ಯಾದವ್ ಅವರ ಷಡ್ಯಂತ್ರವನ್ನು ಕರ್ನಾಟಕ ರಕ್ಷಣಾ ವೇದಿಕೆ ವಿಫಲಗೊಳಿಸಿತ್ತು. ಇದರಿಂದಾಗಿ ಲಾಲೂ ಯಾದವ್ ವ್ಯಗ್ರರಾಗಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಚಳವಳಿಗಾರರನ್ನು ತನ್ನ ಹೊಲಸು ಬಾಯಿಂದ ನಿಂದಿಸಿದರು. ಇದರಿಂದ ಕರ್ನಾಟಕದ ಜನತೆ ಕೆರಳಿತು. ರಾಜ್ಯಾದ್ಯಂತ ಲಾಲೂ ವಿರುದ್ಧ ಹೋರಾಟಗಳು ತೀವ್ರಗೊಂಡವು. ಚಿತ್ರದುರ್ಗಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ರೈಲಿನಲ್ಲಿ ಆಗಮಿಸಿದ್ದ ಲಾಲೂಗೆ ತುಮಕೂರು ಸೇರಿದಂತೆ ಪ್ರತಿ ನಿಲ್ದಾಣಗಳಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದರು.
ಚಳವಳಿಗೆ ಜಯ
ನಾಲ್ಕು ಸಾವಿರಕ್ಕೂ ಹೆಚ್ಚು ಸಿ ಮತ್ತು ಡಿ ದರ್ಜೆಯ ಹುದ್ದೆಗಳ ನೇಮಕಾತಿಯ ಪರೀಕ್ಷೆಗಳೇನೋ ಸ್ಥಗಿತಗೊಂಡವು. ಆದರೆ, ಇದು ತಾತ್ಕಾಲಿಕ ವಿಜಯವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದು ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ, ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದ್ದರು. ಆದರೆ, ಮುಂದೆ ಕಳ್ಳ ಮಾರ್ಗದಲ್ಲಿ ಪರೀಕ್ಷೆಗಳನ್ನು ಇಲಾಖೆ ನಡೆಸುವುದಿಲ್ಲವೆಂಬ ಖಾತರಿ ಏನೂ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ರಕ್ಷಣಾ ವೇದಿಕೆ ತನ್ನ ಹೋರಾಟವನ್ನು ಸ್ಥಗಿತಗೊಳಿಸದೆ ಇಲಾಖೆಯ ಎಲ್ಲಾ ಚಟುವಟಿಕೆಗಳಿಗೂ ಒಂದು ಕಣ್ಣಿಟ್ಟುಕೊಂಡೇ ಬಂದಿತು. ಕರ್ನಾಟಕದಲ್ಲಿ ಮತ್ತೆ ಪರೀಕ್ಷೆ ನಡೆಸದಂತೆ ಒತ್ತಡ ಹೇರಿಕೊಂಡೇ ಬಂತು.
ಕರ್ನಾಟಕ ರಕ್ಷಣಾ ವೇದಿಕೆಯ ರೈಲ್ವೆ ಚಳವಳಿ ಇತರ ರಾಜ್ಯಗಳಿಗೂ ಸ್ಫೂರ್ತಿಯನ್ನು, ಪ್ರೇರಣೆಯನ್ನು ನೀಡಿತು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ರೈಲ್ವೆ ಇಲಾಖೆಗೆ ಬಿಹಾರಿಗಳನ್ನು ತುಂಬುವ ಯತ್ನದ ವಿರುದ್ಧ ಪ್ರತಿಭಟನೆಗಳಾದವು.
ಇದೆಲ್ಲವನ್ನೂ ಕೇಂದ್ರ ಸರ್ಕಾರ ಗಮನಿಸಿತ್ತು. ಕೇಂದ್ರದಲ್ಲಿ ಎರಡನೇ ಅವಧಿಗೆ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಚುನಾವಣೆಯಲ್ಲಿ ಲಾಲೂ ಪ್ರಸಾದ್ ಯಾದವ್ ಬಿಹಾರದಲ್ಲೇ ಧೂಳಿಪಟವಾಗಿದ್ದರು. ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಹೊಸ ರೈಲ್ವೆ ಮಂತ್ರಿಯಾದರು. ಪ್ರಾದೇಶಿಕ ಪಕ್ಷವೊಂದರ ನೇತಾರರಾದ ಮಮತಾ ಪ್ರಾದೇಶಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದರು. ಹೀಗಾಗಿ ತಮ್ಮ ಪ್ರಥಮ ಬಜೆಟ್‌ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆಯ ಬೇಡಿಕೆಯನ್ನು ಈಡೇರಿಸಿದರು. ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ದೇಶಾದ್ಯಂತ ಏಕಕಾಲಕ್ಕೆ ನಡೆಸುವುದಾಗಿ ಅವರು ಘೋಷಿಸಿದರು. ಏಕಕಾಲಕ್ಕೆ ಪರೀಕ್ಷೆಗಳನ್ನು ನಡೆಸುವುದರಿಂದಾಗಿ ಒಂದು ರಾಜ್ಯದ ಅಭ್ಯರ್ಥಿ ಇನ್ನೊಂದು ರಾಜ್ಯದಲ್ಲಿ ಉದ್ಯೋಗ ಗಿಟ್ಟಿಸುವುದನ್ನು ತಪ್ಪಿಸುವುದು ಈ ಘೋಷಣೆಯ ಉದ್ದೇಶವಾಗಿತ್ತು. ಇದಲ್ಲದೇ, ಕರ್ನಾಟಕ ರಕ್ಷಣಾ ವೇದಿಕೆಯ ಬಹುಮುಖ್ಯ ಬೇಡಿಕೆಯಾಗಿದ್ದ ಪ್ರಶ್ನೆಪತ್ರಿಕೆಗಳನ್ನು ಸ್ಥಳೀಯ ಭಾಷೆಯಲ್ಲೇ ನೀಡುವ ಕುರಿತು ಮಮತಾ ಬ್ಯಾನರ್ಜಿ ಘೋಷಣೆ ಮಾಡಿದರು.
ಇದರಿಂದಾಗಿ ಆರು ದಶಕಗಳಿಂದ ಕನ್ನಡಿಗರ ಮೇಲೆ ರೈಲ್ವೆ ಇಲಾಖೆಯಲ್ಲಿ ನಡೆಯುತ್ತಿದ್ದ ನಿರಂತರ ಶೋಷಣೆ ನಿಂತಂತಾಗಿದೆ. ಕನ್ನಡದ ಮಕ್ಕಳು ಮುಂಬರುವ ದಿನಗಳಲ್ಲಿ ನೈಋತ್ಯ ರೈಲ್ವೆಯಲ್ಲಿ ಹೆಚ್ಚುಹೆಚ್ಚು ನೌಕರಿಗಳನ್ನು ಪಡೆಯಲಿದ್ದಾರೆ. ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕನ್ನಡಿಗರು ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ನೂರಾರು ಯುವಕರು ರೈಲ್ವೆಯಲ್ಲಿ ಉದ್ಯೋಗ ಪಡೆದು ಟಿ.ಎ.ನಾರಾಯಣಗೌಡರ ಬಳಿ ಬಂದು "ನಿಮ್ಮಿಂದಾಗಿಯೇ ನಮಗೆ ಉದ್ಯೋಗ ದೊರಕಿದೆ" ಎಂದು ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇದಕ್ಕಿಂತ ಸಾರ್ಥಕತೆ ಇನ್ನೇನು ಬೇಕು?
ಕಾವೇರಿ ಹೋರಾಟ
ಶತಮಾನಗಳ ವಿವಾದವಾಗಿರುವ ಕಾವೇರಿ ನದಿ ನೀರಿನ ಹಕ್ಕಿನ ವಿಷಯದಲ್ಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯವಾಗುತ್ತಲೇ ಇದೆ. ಕರ್ನಾಟಕ ರಕ್ಷಣಾ ವೇದಿಕೆ ಪ್ರಾರಂಭಗೊಂಡ ಕಾಲದಿಂದಲೂ ಕಾವೇರಿ ಚಳವಳಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾ ಬಂದಿದೆ. ಈ ಹೋರಾಟದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಸೇರಿದಂತೆ ಪ್ರಮುಖ ಮುಖಂಡರು, ಕಾರ್ಯಕರ್ತರು ಪೊಲೀಸ್ ದೌರ್ಜನ್ಯಕ್ಕೆ ಒಳಗಾಗಿದ್ದಾರೆ, ಹಲವಾರು ಬಾರಿ ಜೈಲು ಸೇರಿದ್ದಾರೆ.
ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸಿದ್ದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟವನ್ನು ಸಂಘಟಿಸಿತು. ಈ ಸಂದರ್ಭದಲ್ಲಿ ನಾರಾಯಣಗೌಡರು ಸೇರಿದಂತೆ ವೇದಿಕೆಯ ನೂರಾರು ಹೋರಾಟಗಾರರು ಬಳ್ಳಾರಿ ಜೈಲಿಗೆ ಕಳುಹಿಸಲಾಯಿತು.
ಕಾವೇರಿ ನ್ಯಾಯಮಂಡಳಿಯ ಅಂತಿಮ ವರದಿ ಹೊರಬಂದಾಗ ಅದು ಕನ್ನಡಿಗರ ಪಾಲಿಗೆ ಮರಣಶಾಸನ ಎಂಬುದನ್ನು ಸರಿಯಾಗಿಯೇ ಗ್ರಹಿಸಿದ ಕರ್ನಾಟಕ ರಕ್ಷಣಾ ವೇದಿಕೆ ಈ ಸಂಬಂಧ ಪ್ರಬಲ ಹೋರಾಟಕ್ಕೆ ಸಿದ್ಧವಾಯಿತು. ನಾರಾಯಣಗೌಡರು ರಾಜ್ಯಾದ್ಯಂತ ಸಂಚರಿಸಿ ಕನ್ನಡ ಕಾರ್ಯಕರ್ತರನ್ನು ಸಂಘಟಿಸಿದರು. ಕನ್ನಡಿಗರ ಪಾಲಿಗೆ ಅಕ್ಷರಶಃ ಮರಣ ಶಾಸನದಂತೆ ಹೊರಬಿದ್ದ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ವಿರುದ್ಧ ಇಡೀ ರಾಜ್ಯಾದ್ಯಂತ ಮೊದಲು ಬೀದಿಗಿಳಿದು ಕಾವೇರಿ ಚಳವಳಿಗೊಂದು ಮೂರ್ತ ರೂಪ ನೀಡಿದ್ದೇ ರಕ್ಷಣಾ ವೇದಿಕೆ. ನ್ಯಾಯಮಂಡಳಿಯ ಅನ್ಯಾಯದ ತೀರ್ಪಿನ ವಿರುದ್ಧ ಹಳ್ಳಿಯಿಂದ ದಿಲ್ಲಿಯವರೆಗೆ ವ್ಯಾಪಕ ಮತ್ತು ಸಂಘಟಿತ ಆಂದೋಲನ ನಡೆಸಿದ ರಕ್ಷಣಾ ವೇದಿಕೆ ‘ದಿಲ್ಲಿ ದೊರೆ’ಗಳಿಗೆ ಬಿಸಿ ಮುಟ್ಟಿಸುವಲ್ಲಿಯೂ ಹಿಂದೆ ಬೀಳಲಿಲ್ಲ.
ಸುಮಾರು ೨ ಸಾವಿರಕ್ಕೂ ಹೆಚ್ಚು ವೇದಿಕೆಯ ಕಾರ್ಯಕರ್ತರು ದಿಲ್ಲಿಗೆ ತೆರಳಿ ಜಂತರ್ ಮಂತರ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಕಾವೇರಿ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯ ನೀಡಲೇಬೇಕೆಂದು ನಿರ್ಧರಿಸಿದ್ದ ನಾರಾಯಣಗೌಡರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ‘ಇನ್ನೇನು ಎಲ್ಲವೂ ಮುಗೀತು’ ಅಂತ ಈ ನೆಲದ ಜನನಾಯಕರು ಕೈ ಕಟ್ಟಿ ಕೂತ ಹೊತ್ತಲ್ಲೇ ಗೌಡರು ರಾಜ್ಯಾದ್ಯಂತ ಕಾವೇರಿ ಯಾತ್ರೆ ಹೊರಟರು. ಲಕ್ಷಾಂತರ ಕನ್ನಡಿಗರು ಕಾವೇರಿ ಯಾತ್ರೆಗೆ ಬೆಂಬಲ ಸೂಚಿಸಿದರು. ಅದರ ನಡುವೆಯೇ ಚಳವಳಿಯ ತೀವ್ರತೆಗೆ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಸೇರಿದಂತೆ ಇನ್ನಿತರೆ ಸಂಘಟನೆಗಳ ಜತೆಗೂಡಿ ‘ಕೃಷ್ಣ-ಕಾವೇರಿ ಹೋರಾಟ ಸಮನ್ವಯ ಸಮಿತಿ’ ಅಡಿಯಲ್ಲಿ ಬೃಹತ್ ಹೋರಾಟಕ್ಕೆ ಸಜ್ಜುಗೊಂಡರು.
ಸುಮಾರು ಇಪ್ಪತ್ತು ಸಾವಿರ ಕಾರ್ಯಕರ್ತರೊಂದಿಗೆ ದೆಹಲಿ ಮುತ್ತಿಗೆ ನಡೆಯಿತು. ದೆಹಲಿಯ ಇತಿಹಾಸದಲ್ಲಿ ಹೀಗೆ ರಾಜ್ಯವೊಂದರಿಂದ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹೋರಾಟಗಾರರು ಬಂದು ರಣಕಹಳೆ ಮೊಳಗಿಸಿರಲಿಲ್ಲ. ಕನ್ನಡಿಗರ ಬೃಹತ್ ಪ್ರದರ್ಶನವನ್ನು ನೋಡಿ ದಿಲ್ಲಿ ದೊರೆಗಳೇ ದಂಗಾಗಿ ಹೋದರು. ನಾರಾಯಣಗೌಡರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸಲಾಯಿತು. ಕಾವೇರಿ ನ್ಯಾಯಾಧೀಕರಣ ನೀಡಿರುವ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಕಾರಣದಿಂದ ಯಾವುದೇ ಕಾರಣಕ್ಕೂ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸಬೇಡಿ. ಹಾಗೊಂದು ವೇಳೆ ಪ್ರಕಟಿಸಿದ್ದೇ ಆದಲ್ಲಿ ಅದರಿಂದ ಕರ್ನಾಟಕದಲ್ಲಿ ಪ್ರತಿಕೂಲ ಪರಿಣಾಮಗಳಾಗುತ್ತದೆ ಎಂದು ಮನವಿ ಮಾಡಲಾಯಿತು.
ಇದರ ಪರಿಣಾಮ; ಕೇಂದ್ರ ಸರ್ಕಾರ ಅಂತಿಮ ತೀರ್ಪನ್ನು ಗೆಝೆಟ್‌ನಲ್ಲಿ ಪ್ರಕಟಿಸಲಿಲ್ಲ. ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಯಿತು.
ಕಾವೇರಿ ವಿವಾದ ಸದ್ಯ ನ್ಯಾಯಾಲದಲ್ಲಿದೆ. ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಆದರೆ ಕರ್ನಾಟಕಕ್ಕೆ ಮಾರಣಾಂತಿಕವೇ ಆಗಿದ್ದ ನ್ಯಾಯಾಧೀಕರಣ ತೀರ್ಪು ಗೆಜೆಟ್‌ನಲ್ಲಿ ಪ್ರಕಟವಾಗದಂತೆ ಕೇಂದ್ರದ ಮೇಲೆ ತನ್ನ ‘ಕನ್ನಡ ಶಕ್ತಿ’ಯಿಂದ ಒತ್ತಡ ಹೇರಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಈ ಮೂಲಕ ವಾದರೂ ದಿಲ್ಲಿಯಲ್ಲಿ ಕನ್ನಡಿಗರು ‘ಒಂದು ಹಂತದ ಜಯ’ ಸಾಧಿಸಿದರೆಂದರೆ ಅದಕ್ಕೆ ಕಾರಣ ಕರ್ನಾಟಕ ರಕ್ಷಣಾ ವೇದಿಕೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ.
ಆಂಧ್ರ ಹಾಲಿಗೆ ಕೊಡಲಿಪೆಟ್ಟು:
ರಕ್ಷಣಾ ವೇದಿಕೆ ಯಾವುದೇ ಹೋರಾಟಗಳನ್ನು ಕೈಗೆತ್ತಿಕೊಂಡರೂ ಅದಕ್ಕೊಂದು ತಾರ್ಕಿಕ ಅಂತ್ಯ ನೀಡದೇ ವಿಶ್ರಮಿಸಿದ ಉದಾಹರಣೆಗಳಿಲ್ಲ. ಚಳವಳಿಯ ಬದ್ಧತೆ ಆ ಮಟ್ಟದ್ದು. ಹೋರಾಟದ ಆಳಕ್ಕಿಳಿದು, ಅದಕ್ಕೊಂದು ಸಂಘಟಿತ ವ್ಯಾಪಕತೆ ನೀಡುವ ಪರಿ ಸಾಮಾನ್ಯವಲ್ಲ.
ಇಂಥ ಹೋರಾಟದ ಹಲವು ಮಜಲುಗಳ ಪೈಕಿ ಆಂಧ್ರಪ್ರದೇಶದ ಹಾಲಿನ ವಿರುದ್ಧ ನಡೆದ ಚಳವಳಿಯೂ ಒಂದು;
ಆಂಧ್ರದ ಪ್ರಭಾವಿ ರಾಜಕಾರಣಿಯೊಬ್ಬರ ಒಡೆತನಕ್ಕೆ ಸೇರಿದ ಹಾಲು ಕರ್ನಾಟಕಕ್ಕೆ ಧಾಗುಂಡಿ ಇಟ್ಟಿತ್ತು. ಬೆಂಗಳೂರು, ಕೋಲಾರ ಇಲ್ಲೆಲ್ಲಾ ಈ ಕಲಬೆರಕೆ ಹಾಲಿನದ್ದೇ ಹಾಲಾಹಲ. ಹೈನುಗಾರಿಕೆಯನ್ನೇ ನಂಬಿ ಬದುಕು ಕಟ್ಟುತ್ತಿರುವ ಈ ನೆಲದ ಅಸಂಖ್ಯಾತ ರೈತ ಸಮೂಹದ ‘ಹೊಟ್ಟೆ ಮೇಲೆ ಹೊಡೆಯುವ’ ಆಂಧ್ರ ಹಾಲಿನ ವಿರುದ್ಧ ರಕ್ಷಣಾ ವೇದಿಕೆ ದಿಟ್ಟ ಹೋರಾಟವನ್ನೇ ರೂಪಿಸಿತ್ತು. ನೆರೆಯ ಕೋಲಾರದಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದ್ದ ಆಂಧ್ರ ಹಾಲಿನ ವಿರುದ್ಧ ಅಲ್ಲಿನ ವೇದಿಕೆಯ ಕಾರ‍್ಯಕರ್ತರು ಸೆಟೆದು ನಿಂತರು. ಆರೋಗ್ಯಕ್ಕೂ ಮಾರಕವಾಗಿರುವ ಆಂಧ್ರ ಹಾಲು ಪೂರೈಕೆ ಸ್ಥಗಿತಗೊಳ್ಳಬೇಕು. ಆ ಮೂಲಕ ಸ್ಥಳೀಯ ರೈತರ ಬದುಕು ಹಸನಾಗಬೇಕು ಎಂಬುದು ವೇದಿಕೆ ಕಾರ‍್ಯಕರ್ತರ ಒಕ್ಕೊರೊಲ ದನಿಯಾಗಿತ್ತು. ಈ ಸಂಬಂಧ ವ್ಯಾಪಕ ಮತ್ತು ಉಗ್ರ ಪ್ರತಿಭಟನೆಗಳೇ ನಡೆದವು. ಕಾರ್ಯಕರ್ತರ ವಿರುದ್ಧ ಪೊಲೀಸ್ ಕೇಸುಗಳು ದಾಖಲಾದವು, ದೌರ್ಜನ್ಯ, ಹಲ್ಲೆಗಳು ಎಗ್ಗಿಲ್ಲದೇ ನಡೆಯಿತು. ಅಷ್ಟಾದರೂ ರಕ್ಷಣಾ ವೇದಿಕೆ ಬಗ್ಗಲಿಲ್ಲ. ಆಂಧ್ರ ರಾಜಕಾರಣಿಯ ಏನೆಲ್ಲಾ ಪ್ರಭಾವ, ಪ್ರಾಬಲ್ಯಗಳು ಕಾರ‍್ಯಕರ್ತರ ಕಾಠಿಣ್ಯದ ಮುಂದೆ ಕೆಲಸ ಮಾಡಲಿಲ್ಲ.
ಇದರ ಪರಿಣಾಮ; ಯಥೇಚ್ಛವಾಗಿ ಸರಬರಾಜಾಗುತ್ತಿದ್ದ ಆಂಧ್ರದ ಹಾಲು ಸ್ಥಗಿತಗೊಂಡಿತು. ಸ್ಥಳೀಯ ರೈತರು ನೆಮ್ಮದಿಯ ನಿಟ್ಟುಸಿರಿಟ್ಟರು.
ಕರವೇಯ ಹೋರಾಟದ ದಿಕ್ಕು ಕೇವಲ ಕರ್ನಾಟಕ, ಕನ್ನಡಿಗರಷ್ಟೇ ಅಲ್ಲ, ಈ ನೆಲದ ದುಡಿಯುವ ಮಂದಿ, ಬೆವರಿಳಿಸುವ ರೈತ, ಅನ್ಯಾಯಕ್ಕೊಳಗಾದ ಅಸಹಾಯಕ ಎಂಬುದಕ್ಕೆ ಈ ಹೋರಾಟ ಉದಾಹರಣೆಯಷ್ಟೆ.
ಬೆಂಗಳೂರು ವಿಮಾನ ನಿಲ್ದಾಣ
ದೇವನಹಳ್ಳಿಯಲ್ಲಿ ನಿರ್ಮಾಣಗೊಂಡ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ನಡೆದ ಹೋರಾಟ ಅವಿಸ್ಮರಣೀಯವಾದುದು.
ರೈತರ ಸಾವಿರಾರು ಎಕರೆ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಾನು ಈ ಹಿಂದೆ ನೀಡಿದ್ದ ವಾಗ್ದಾನವನ್ನು ಮರೆಯಿತು. ಸೂಕ್ತ ಪರಿಹಾರ ನೀಡದೆ ರೈತರನ್ನು ವಂಚಿಸಿತ್ತು. ಅಷ್ಟಲ್ಲದೇ ಹಳೇ ವಿಮಾನ ನಿಲ್ದಾಣದಲ್ಲಿ ಉದ್ಯೋಗ ಕಟ್ಟಿಕೊಂಡಿದ್ದ ಕನ್ನಡಿಗರನ್ನು ಬೀದಿಪಾಲು ಮಾಡುವ ಹುನ್ನಾರವನ್ನೂ ಅದು ನಡೆಸಿತ್ತು.
ಇದೆಲ್ಲಾ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಮನಗಂಡ ರಕ್ಷಣಾ ವೇದಿಕೆ ರೈತ ಪರ ಹೋರಾಟಕ್ಕೆ ಸಿದ್ಧಗೊಂಡಿತು. ಸ್ವಾಧೀನಪಡಿಸಿಕೊಂಡ ರೈತರ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು. ರೈತರ ಮಕ್ಕಳಿಗೆ ವಿಮಾನ ನಿಲ್ದಾಣದಲ್ಲಿ ಕೆಲಸ ನೀಡಬೇಕು. ಉದ್ಯೋಗದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎನ್ನುವುದು ವೇದಿಕೆಯ ಬೇಡಿಕೆಯಾಗಿತ್ತು.
ಹೋರಾಟಕ್ಕೆ ಸಾಕಷ್ಟು ಅಡ್ಡಿ ಆತಂಕಗಳು ಎದುರಾದವು. ಆಳುವ ಸರ್ಕಾರದಿಂದಲೇ ಚಳವಳಿಯನ್ನು ನಿಯಂತ್ರಿಸುವ, ನಿಗ್ರಹಿಸುವ ಚಟುವಟಿಕೆಗಳೂ ನಡೆದವು. ಆದರೆ ವೇದಿಕೆಯ ಹೋರಾಟದ ಮುಂದೆ ಸರ್ಕಾರವೇ ಮಂಡಿಯೂರಿ ಕೂರಬೇಕಾಯಿತು.
ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರೆಯಿತು. ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಸೇವೆಯನ್ನು ಬೇರೆ ರಾಜ್ಯದ ಯುವಕರಿಗೆ ಒದಗಿಸುವ ನಿಲುವಿನಿಂದ ಸರ್ಕಾರ ಹಿಂದೆ ಸರಿಯಬೇಕಾಯಿತು. ಕನ್ನಡಿಗ ಯುವಕರಿಗೆ ಸೂಕ್ತ ಉದ್ಯೋಗಾವಕಾಶವೂ ದೊರೆಯಿತು. ಬಹುಮುಖ್ಯವಾಗಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಬೇಕೆಂಬ ವೇದಿಕೆಯ ಮತ್ತೊಂದು ಬೇಡಿಕೆಗೆ ಜಂಟಿ ಸದನ ಸಮಿತಿ ಪೂರಕವಾಗಿಯೇ ಸ್ಪಂದಿಸಿತ್ತು.
ಕನ್ನಡ ಉದ್ದಿಮೆದಾರರ ಪರ
ರಾಜ್ಯದಲ್ಲಿ ಬೃಹತ್ ಉದ್ದಿಮೆಗಳ ಸ್ಥಾಪನೆಗೆ ಹೊರರಾಜ್ಯ, ವಿದೇಶಿ ಬಂಡವಾಳಿಗರಿಗೇ ಹೆಚ್ಚಿ ಆದ್ಯತೆ ನೀಡುತ್ತಿತ್ತು ಸರ್ಕಾರ. ಹಾಗೊಂದು ವೇಳೆ ಇದ್ದ ಒಂದಿಷ್ಟು ಕನ್ನಡಿಗ ಉದ್ದಿಮೆದಾರರ ಮೇಲೆ ಇನ್ನಿಲ್ಲದ ದಬ್ಬಾಳಿಕೆ, ನಿರ್ಲಕ್ಷ್ಯ, ದೌರ್ಜನ್ಯ ವ್ಯಾಪಕವಾಗಿಯೇ ಇತ್ತು. ಈ ಸಂದರ್ಭದಲ್ಲಿ ಸ್ಥಳೀಯ ಉದ್ದಿಮೆದಾರರ ಪರ ಮೊಟ್ಟಮೊದಲ ಬಾರಿಗೆ ದನಿ ಎತ್ತಿದ್ದು ರಕ್ಷಣಾ ವೇದಿಕೆ.
ಬೃಹತ್ ಅಥವಾ ಸಣ್ಣ ಉದ್ಯಮಗಳು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸದೃಢಗೊಳಿಸುವುದಷ್ಟೇ ಅಲ್ಲದೆ, ಸ್ಥಳೀಯರ ಜೀವನಮಟ್ಟವನ್ನು ಸುಧಾರಿಸುತ್ತದೆ. ಕರ್ನಾಟಕದಲ್ಲಿ ಉದ್ದಿಮೆ ನಡೆಸಲು ಕನ್ನಡಿಗರಿಗೆ ಬೇಕಾದ ಸೂಕ್ತ ವಾತಾವರಣ ಕಲ್ಪಿಸಿ, ಅವರಿಗೆ ನೈತಿಕ ಬೆಂಬಲ ನೀಡುವುದು ಮತ್ತು ಅಂತಹ ಉದ್ದಿಮೆಗಳಲ್ಲಿ ಕನ್ನಡಿಗರಿಗೇ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಂತೆ ನೋಡಿಕೊಳ್ಳುವುದು ವೇದಿಕೆಯ ಮುಖ್ಯ ನಿಲುವಾಗಿತ್ತು.
ಈ ನಿಟ್ಟಿನಲ್ಲಿ ಕನ್ನಡಿಗರ ಉದ್ದಿಮೆದಾರರು, ಅನಿವಾಸಿ ಕನ್ನಡಿಗರಿಗೆ ಹೆಚ್ಚಿನ ಬಂಡವಾಳ ಹೂಡಲು ಅವಕಾಶ ಕಲ್ಪಿಸುವಂತೆ ವೇದಿಕೆ ಹೋರಾಟ ನಡೆಸಿತು. ಅಷ್ಟಲ್ಲದೆ, ಉದ್ದಿಮೆದಾರರಿಗೆ ಅನ್ಯಾಯವಾದಾಗಲೆಲ್ಲಾ ಅವರ ಪರ ನಿಂತಿತು. ಸರ್ಕಾರದ ಮಟ್ಟದಿಂದಲೂ ಇದಕ್ಕೆ ಪೂರಕ ಸ್ಪಂದನೆ ವ್ಯಕ್ತವಾಯಿತು.
ಶಾಸ್ತ್ರೀಯ ಸ್ಥಾನಮಾನ
ರಕ್ಷಣಾ ವೇದಿಕೆಯ ಹೋರಾಟದ ಮಜಲುಗಳಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟವೂ ಒಂದು. ಕನ್ನಡ ಭಾಷೆಗೆ ೨೦೦೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಅತೀ ಹೆಚ್ಚು ಜ್ಞಾನಪೀಠ ಪುರಸ್ಕಾರದ ಹೆಗ್ಗಳಿಕೆ ಸಿಕ್ಕಿದ್ದು ಕನ್ನಡ ಸಾಹಿತ್ಯಕ್ಕೆ. ಅತೀ ಪ್ರಾಚೀನ ಮತ್ತು ಶ್ರೀಮಂತ ಹಿನ್ನೆಲೆಯುಳ್ಲ ಕನ್ನಡಕ್ಕೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡದೆ ಪೂರ್ವಾಗ್ರಹಪೀಡಿತವಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ರಕ್ಷಣಾ ವೇದಿಕೆ ಕಾಲದಿಂದಲೂ ಕರ್ನಾಟಕದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಲೇ ಬಂದಿರುವ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿತು. ಶಾಸ್ತ್ರೀಯ ಸ್ಥಾನಮಾನಕ್ಕೆ ಆಗ್ರಹಿಸಿ ನಾಡೋಜ ಡಾ.ದೇ.ಜವರೇಗೌಡರು ಮೈಸೂರಿನಲ್ಲಿ ಉಪವಾಸ ನಿರತರಾದರು. ನಾರಾಯಣಗೌಡರು ದೇಜಗೌ ಉಪವಾಸಕ್ಕೆ ಬೆಂಬಲ ಸೂಚಿಸಿದರಲ್ಲದೆ, ರಾಜ್ಯವ್ಯಾಪಿ ಹೋರಾಟದ ಮುಂಚೂಣಿ ವಹಿಸಿದರು.
ಮತ್ತೆ ದೂರದ ದಿಲ್ಲಿಯಲ್ಲಿ ಕನ್ನಡದ ಘೋಷಣೆಗಳು ಮೊಳಗಿದವು. ಈ ಬಾರಿ ಸಾವಿರಾರು ಕನ್ನಡದ ಕಾರ‍್ಯಕರ್ತರು ದಿಲ್ಲಿಯಲ್ಲಿ ಕಾಣಿಸಿಕೊಂಡರು. ದಿಲ್ಲಿಯ ಇತಿಹಾಸದಲ್ಲೇ ಇಷ್ಟು ಪ್ರಮಾಣದಲ್ಲಿ ಕಾರ‍್ಯಕರ್ತರು ಬಂದಿಳಿದು, ಕನ್ನಡದ ಹಕ್ಕಿಗಾಗಿ ಅಬ್ಬರಿಸಿದ್ದು ಅದೇ ಪ್ರಥಮ. ದಿಲ್ಲಿಯ ಜಂತರ್ ಮಂತರ್‌ನಲ್ಲಂತೂ ಕನ್ನಡಿಗರದ್ದೇ ಕಲರವ....
ಗೌಡರ ನೇತೃತ್ವದಲ್ಲಿ ಪ್ರಧಾನಿಗಳಿಗೆ ಮನವಿ ಸಲ್ಲಿಸಲಾಯಿತು. ದಿಲ್ಲ್ಲಿಯ ರಾಜಕಾರಣಿಗಳು ಕನ್ನಡಿಗರ ಹಿಂಡು ಕಂಡು ಬೆಚ್ಚಿಬಿದ್ದರು. ಕನ್ನಡದ ಬದ್ಧತೆ ಇಲ್ಲೂ ಹುಸಿಯಾಗಲಿಲ್ಲ. ನವೆಂಬರ್ ಹೊತ್ತಿಗೆ ಕೊನೆಗೂ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯಿತು. ಸಮಸ್ತ ಕನ್ನಡಿಗರು ಸಂಭ್ರಮಿಸಿದರು.
ಕನ್ನಡಿಗರ ಸವಾಲು...
ವೇದಿಕೆ ಸಾಗಿ ಬಂದ ಹಾದಿ ತುಂಬಾ ಹೋರಾಟಗಳೇ ಹೋರಾಟಗಳು. ಹೋರಾಟದ ಮೂಲ ಉದ್ದೇಶ ಮಾತ್ರ
ಒಂದೇ ಕನ್ನಡ ಮತ್ತು ಕರ್ನಾಟಕ. ಬೆಂಗಳೂರಿನಲ್ಲಿ ರೇಡಿಯೋ ಸಿಟಿ ಎಂಬ ಎಫ್ ಎಂ ವಾಹಿನಿ ಅಕ್ಷರಶಃ ಕನ್ನಡ ವಿರೋಧಿ ಧೋರಣೆ ಅನುಸರಿಸಿತ್ತು. ಕನ್ನಡ ಹಾಡುಗಳನ್ನು ಕೇಳುವವರೇ ಇಲ್ಲ, ಅಂಥ ಹಾಡಿಗೆ ಮಾರುಕಟ್ಟೆಯೂ ಇಲ್ಲ ಎಂದು ಕಣ್ಣಿಗೆ ಬಟ್ಟೆ ಕಂಡ ಎಫ್‌ಎಂ ವಾಹಿನಿ ಬರೇ ಹಿಂದಿ ಹಾಡುಗಳನ್ನೇ ಕನ್ನಡದ ಕೇಳುಗರಿಗೆ ಬಲವಂತವಾಗಿ ತುರುಕುವ ಕೃತ್ಯಕ್ಕೆ ಕೈಹಾಕಿತ್ತು. ಇದರ ವಿರುದ್ಧ ಹರಿಹಾಯ್ದ ರಕ್ಷಣಾ ವೇದಿಕೆ ಮೊದಲ ಬಾರಿಗೆ ರೇಡಿಯೋ ಸಿಟಿ ವಾಹಿನಿ ವಿರುದ್ಧ ಪ್ರತಿಭಟನೆ ನಡೆಸಿತು. ಇದರ ಪರಿಣಾಮ ವಾಹಿನಿ ಕನ್ನಡ ಚಿತ್ರಗೀತೆಗಳನ್ನು ಬಿತ್ತರಿಸಿತು. ಕನ್ನಡದ ಕೇಳುಗರು ಸಂಭ್ರಮಿಸಿದರು...ಮಾರುಕಟ್ಟೆ ವಿಸ್ತರಿಸಿತು. ನೋಡನೋಡುತ್ತಿದ್ದಂತೆ ಒಂದೊರ ಹಿಂದೊಂದರಂತೆ ಎಫ್ ಎಂ ವಾಹಿನಿಗಳು ಬರತೊಡಗಿದವು. ಎಲ್ಲೆಡೆ ಕನ್ನಡದ ಹಾಡುಗಳು...ಕನ್ನಡ ಕೇಳುಗರ ಸಂಖ್ಯೆಯೂ ನಿರೀಕ್ಷೆಗೂ ಮೀರಿ ಬೆಳೆಯಿತು, ಮಾರುಕಟ್ಟೆ ವ್ಯಾಪಕವಾಯಿತು....ಹೀಗೆ ಎಫ್‌ಎಂ ವಾಹಿನಿಗಳಲ್ಲಿ ಕನ್ನಡಕ್ಕೆ, ಕನ್ನಡ ಚಿತ್ರಗೀತೆಗಳಿಗೆ ಭದ್ರ ಬುನಾದಿ ಕಲ್ಪಿಸಿದ ಹೆಗ್ಗಳಿಕೆ ರಕ್ಷಣಾ ವೇದಿಕೆಯದ್ದು.
ಅಷ್ಟಲ್ಲದೆ, ವಿಜಾಪುರ ವಿವಿಯ ಸಿಂಡಿಕೇಟ್‌ಗೆ ಆಂಧ್ರ ಮೂಲದ ಮಹಿಳೆಯನ್ನು ಸದಸ್ಯೆಯಾಗಿ ಸರ್ಕಾರ ನೇಮಕ ಮಾಡಿತ್ತು. ಕನ್ನಡದ ವಿವಿಯಲ್ಲಿ ಸದಸ್ಯೆಯಾಗಿ ನೇಮಕಗೊಳ್ಳಲು ಕನ್ನಡಿಗರ‍್ಯಾರೂ ಇಲ್ಲವೇ ಅಥವಾ ಕನ್ನಡಿಗರಿಗೆ ಅರ್ಹತೆಯೇ ಇಲ್ಲವೇ ಎಂಬುದು ವೇದಿಕೆ ಪ್ರಶ್ನೆಯಾಗಿತ್ತು. ಕರವೇ ಚಳವಳಿಯ ತೀವ್ರತೆಗೆ ಬೆದರಿದ ಸರ್ಕಾರ ನೇಮಕಾತಿಯನ್ನು ರದ್ದುಗೊಳಿಸಿತು.
ರಾಜ್ಯ ಸರ್ಕಾರ ಆನ್ ಲೈನ್ ಲಾಟರಿಯನ್ನು ಆರಂಭಿಸಿತು. ಪ್ಲೇವಿನ್ ಹೆಸರಿನಲ್ಲಿ ಆರಂಭಗೊಂಡ ಆನ್‌ಲೈನ್ ಲಾಟರಿ ಬೇರೆ ಬೇರೆ ಹೆಸರುಗಳೊಂದಿಗೆ ರಾಜ್ಯವನ್ನೇ ವ್ಯಾಪಿಸಿಕೊಂಡಿತು. ಇದರ ಪ್ರಭಾವ ಎಷ್ಟಿತ್ತೆಂದರೆ ರಾಜ್ಯಾದ್ಯಂತ ಶ್ರಮಿಕ ಜನವರ್ಗ ಇದರಿಂದಾಗಿ ದುಡಿದ ಹಣವನ್ನೆಲ್ಲ ಆನ್‌ಲೈನ್ ಜೂಜಿಗೆ ತೊಡಗಿಸಿ ದರಿದ್ರರಾಗತೊಡಗಿದರು. ಹಲವು ಸಂಸಾರಗಳು ಒಡೆದು ಹೋದವು. ಸಾಕಷ್ಟು ಮಂದಿ ತಮ್ಮೆಲ್ಲ ಗಳಿಕೆ, ಆಸ್ತಿಯನ್ನೆಲ್ಲ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದರು.
ಈ ಆನ್‌ಲೈನ್ ಲಾಟರಿ ವಿರುದ್ಧ ಅಕ್ಷರಶಃ ಸಮರವನ್ನೇ ಕರವೇ ಘೋಷಿಸಿತು. ಎಲ್ಲೆಡೆ ಕರವೇ ಕಾರ್ಯಕರ್ತರು ಆನ್‌ಲೈನ್ ಲಾಟರಿ ಅಂಗಡಿಗಳ ಮೇಲೆ ದಾಳಿ ನಡೆಸಿದರು. ಲಾಟರಿಗೆ ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ರಸ್ತೆಗೆ ಎಸೆದರು. ಹೋರಾಟದ ತೀವ್ರತೆಯಿಂದ ಬೆಚ್ಚಿ ಬಿದ್ದ ಸರ್ಕಾರ ಆನ್‌ಲೈನ್ ಲಾಟರಿಯನ್ನು ಸಂಪೂರ್ಣ ನಿಷೇಧಿಸಿತು.
ಶಾಸಕರ ವಿರುದ್ಧ ಕಿಡಿ
ಡೆರಿಕ್ ಫುಲಿನ್ ಫಾ ಎಂಬುವವರನ್ನು ಬಿಜೆಪಿ ಸರ್ಕಾರ ಆಂಗ್ಲೋ ಇಂಡಿಯನ್ ಕೋಟಾದಡಿ ವಿಧಾನ ಪರಿಷತ್‌ಗೆ ನೇಮಕ ಮಾಡಿತ್ತು. ದುರಂತವೆಂದರೆ ಈ ಪುಣ್ಯಾತ್ಮನಿಗೆ ಕನ್ನಡವೇ ಬಾರದು! ಕನ್ನಡ ಬಾರದ ಈ ಶಾಸಕ ವಿಧಾನಸಭೆಯಲ್ಲಿ ಇಂಗ್ಲೀಷಿನಲ್ಲಿ ಭಾಷಣ ಮಾಡತೊಡಗಿದರು. ‘ದಯಮಾಡಿ ಕನ್ನಡದಲ್ಲಿ ಮಾತನಾಡಿ’ ಅಂತ ಖುದ್ದು ವಿದಾನಸಭಾಧ್ಯಕ್ಷರೇ ಕೋರಿದರೂ ಡೆರಿಕ್ ಫುಲಿನ್ ಫಾ ಉದ್ಧಟತನದಿಂದ ವರ್ತಿಸಿದರು. ನನಗೆ ಕನ್ನಡ ಬಾರದು...ನಾನು ಇಂಗ್ಲೀಷಿನಲ್ಲಿಯೇ ಮಾತನಾಡುವುದು ಎಂದು ಉತ್ತರಿಸಿದ್ದರು.
ಇಷ್ಟಾದರೂ ಡೆರಿಕ್ ಫುಲಿನ್ ಫಾ ಅವರ ಕನ್ನಡ ವಿರೋಧಿ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದರೆ ಗಂಭೀರವಾಗಿ ಪರಿಗಣಿಸಿದ್ದು ರಕ್ಷಣಾ ವೇದಿಕೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ವ್ಯವಸ್ಥೆಗೊಳಿಸಿದ್ದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ಡೆರಿಕ್ ಫುಲಿನ್ ಫಾ ಅವರಿಗೆ ವೇದಿಕೆಯ ಕಾರ‍್ಯಕರ್ತರು ಘೇರಾವ್ ಹಾಕಿದರು. ಕನ್ನಡ ಕಲಿಯುವಂತೆ ತಾಕೀತು ಮಾಡಿದರು. ರಕ್ಷಣಾ ವೇದಿಕೆ ಕಾರ‍್ಯಕರ್ತರ ಅದಮ್ಯ ಕನ್ನಡ ಪ್ರೇಮ ಕಂಡು ಖುದ್ದು ಡೆರಿಕ್ ಫುಲಿನ್ ಫಾ ಬೆಕ್ಕಸಬೆರಗಾದರು.
ಈ ಘಟನೆ ನಡೆದ ಮಾರನೇ ದಿನವೇ ಖುದ್ದು ಡೆರಿಕ್ ಫುಲಿನ್ ಫಾ ತಮ್ಮ ಪತ್ನಿಯ ಜತೆ ಗಾಂಧಿನಗರದಲ್ಲಿರುವ ರಕ್ಷಣಾ ವೇದಿಕೆಯ ಕಚೇರಿಗೆ ಭೇಟಿ ನೀಡಿ, ನಾರಾಯಣ ಗೌಡರನ್ನು ಭೇಟಿಯಾದರು. ತಮ್ಮ ನಡವಳಿಕೆಗೆ ಕ್ಷಮೆ ಕೋರಿದ್ದಲ್ಲದೆ ತಾವು ಖಂಡಿತಾ ಕನ್ನಡ ಕಲಿಯುವುದಾಗಿ ಭರವಸೆ ನೀಡಿದರು!
ಇದನ್ನೇ ಹೋಲುವ ಮತ್ತೊಂದು ಪ್ರಕರಣವೂ ರಕ್ಷಣಾ ವೇದಿಕೆಯ ಇತಿಹಾಸದ ಪುಟಗಳಲ್ಲಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ವಿಧಾನಸಭೆ ಪ್ರವೇಶಿಸಿದ್ದರು. ಸಚಿವ ಸ್ಥಾನ ಒಲಿದು ಬಂದಾಗ ಕನ್ನಡ ಬಾರದು ಎಂಬ ಕಾರಣಕ್ಕೆ ಇಂಗ್ಲೀಷಿನಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರ ವಿರುದ್ಧ ಪ್ರತಿಭಟಿಸಿದ ಕಾರ‍್ಯಕರ್ತರು ಸದನ ನಡೆಯುವ ಸಂದರ್ಭದಲ್ಲಿ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳನ್ನು ಎಸೆದು ಗಟ್ಟಿದನಿಯಲ್ಲಿ ಪ್ರತಿಭಟಿಸಿ, ಬಿಸಿಮುಟ್ಟಿಸಿದ್ದರು.
ಮೇರು ನಟ ಡಾ.ರಾಜ್ ವೀರಪ್ಪನ್ ಕಪಿಮುಷ್ಠಿಯಿಂದ ಬಿಡುಗಡೆಯಾದ ನಂತರ ರಾಜ್ಯದಲ್ಲಿದ್ದ ಕೆಲವು ತಮಿಳು ವ್ಯಾಮೋಹಿಗಳು ಬೆಂಗಳೂರಿನಲ್ಲಿ ಸಮಾವೇಶವೊಂದಕ್ಕೆ ಸಿದ್ಧತೆ ನಡೆಸಿದ್ದರು. ಈ ಸಮಾವೇಶದಲ್ಲಿ ಎಲ್‌ಟಿಟಿಇ ಬೆಂಬಲಿಗ ನೆಡುಮಾರನ್‌ಗೆ ಸನ್ಮಾನಿಸುವ ಉದ್ದೇಶವಿತ್ತು. ಅದಕ್ಕಾಗಿ ಭರದ ಸಿದ್ಧತೆಯೇ ನಡೆಯಿತು. ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದು ರಕ್ಷಣಾ ವೇದಿಕೆ. ಒಂದು ವೇಳೆ ಬೆಂಗಳೂರಿನಲ್ಲಿ ತಮಿಳು ಸಮಾವೇಶ ನಡೆದರೆ ರಕ್ತಪಾತವೇ ಆದೀತು ಎಂಬ ಸ್ಪಷ್ಟ ಎಚ್ಚರಿಕೆಯನ್ನೂ ಸಂಘಟಕರಿಗೆ ರವಾನಿಸಿತು. ಇರದ ಪರಿಣಾಮ ನೆಡುಮಾರನ್‌ಗೆ ಸತ್ಕಾರ ರದ್ದಾಯಿತು.
ಬೆಳಗಾವಿಯಲ್ಲಿ ಕನ್ನಡದ ಕಂಪು...
ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಬೆಳಗಾವಿಯನ್ನು ಕಾಲದಿಂದಲೂ ಆಳುವ ಸರ್ಕಾರಗಳು ನಿರ್ಲಕ್ಷ್ಯ ತೋರುತ್ತಲೇ ಬಂದಿದ್ದವು. ಇದರ ಪರಿಣಾಮ ಬೆಳಗಾವಿ ಕರ್ನಾಟಕದಲ್ಲಿದ್ದರೂ ಅಲ್ಲಿ ಮರಾಠಿ ಭಾಷಿಕರ ಆಟೋಟಾಪ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ದ್ದೇ ಆಧಿಪತ್ಯ.
ಇದನ್ನೇ ದುರ್ಬಳಕೆ ಮಾಡಿಕೊಂಡ ಎಂಇಎಸ್‌ನ ಕಿಡಿಗೇಡಿಗಳು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ನಿರ್ಧಾರಕ್ಕೆ ಬಂದರು. ಬೆಳಗಾವಿ ಪಾಲಿಕೆಯೂ ಇದನ್ನೇ ನಿರ್ಣಯಿಸಿತು. ಆಗ ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದರು.
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಪಾಲಿಕೆ ತೀರ್ಮಾನದ ವಿರುದ್ಧ ಸೆಟೆದು ನಿಂತಿದ್ದು ರಕ್ಷಣಾ ವೇದಿಕೆ. ಈ ಸಂಬಂಧ ಉಗ್ರ ಹೋರಾಟಕ್ಕೆ ಕಾರ‍್ಯಕರ್ತರು ಸಜ್ಜಾದರು. ಬೆಂಗಳೂರಿನ ಶಾಸಕರ ಭವನಕ್ಕೆ ಬೆಳಗಾವಿ ಪಾಲಿಕೆ ಮೇಯರ್ ವಿಜಯ್ ಮೋರೆ ಬಂದಿರುವ ಮಾಹಿತಿ ಪಡೆದ ಕಾರ‍್ಯಕರ್ತರು ಆತನ ಮುಖಕ್ಕೆ ಮಸಿ ಬಳಿದರು. ಈ ಪ್ರಕರಣ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಯಿತು. ಟೀಕೆ, ಬೆಂಬಲ ಎರಡೂ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ರಕ್ಷಣಾ ವೇದಿಕೆ ಕಾರ‍್ಯಕರ್ತರ ಬೆಂಬಲಕ್ಕೆ ನಿಂತಿದ್ದು ಡಾ.ಪೂರ್ಣಚಂದ್ರ ತೇಜಸ್ವಿ. ‘ನಾಡದ್ರೋಹದ ಕೆಲಸ ಮಾಡಿರುವಾತನ ಮುಖಕ್ಕೆ ಮಸಿ ಬಳಿಯದೆ ಫೇರ್ ಅಂಡ್ ಲವ್ಲಿ ಹಚ್ಬೇಕಿತ್ತೇ?’ ಅಂತ ಕುಟುಕಿದ್ದರು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಧರಂಸಿಂಗ್ ಸರ್ಕಾರ ಬೆಳಗಾವಿ ಪಾಲಿಕೆಯ ಚುನಾಯಿತ ಮಂಡಳಿಯನ್ನು ವಜಾಗೊಳಿಸಿತು.
ಹೀಗೆ ಎಂಇಎಸ್‌ನ ಆಟೋಟಾಪ, ದಬ್ಬಾಳಿಕೆಯನ್ನು ನಿಯಂತ್ರಿಸಿ, ಬೆಳಗಾವಿ ಪಾಲಿಕೆಯಲ್ಲಿ ಕನ್ನಡ ಬಾವುಟ ಹಾರಿಸುವ ಐತಿಹಾಸಿಕ ನಿರ್ಧಾರಕ್ಕೆ ಬಂದ ನಾರಾಯಣಗೌಡರು ಇಡೀ ಬೆಳಗಾವಿಯನ್ನು ಸುತ್ತಿದ್ದರು. ಸಮಸ್ತ ಕನ್ನಡಿಗರನ್ನೂ ಒಗ್ಗೂಡಿಸಿದರು. ಕನ್ನಡೇತರರ ವಿಶ್ವಾಸ ಗಳಿಸಿದರು. ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕನ್ನಡ ಅಭ್ಯರ್ಥಿಗಳನ್ನು ನಿಲ್ಲಿಸಿದರು. ಕನ್ನಡ ಅಭ್ಯರ್ಥಿಗಳ ಪ್ರಚಾರ ನಡೆಸಿ, ಅವರಿಗೆ ನೈತಿಕ ಬೆಂಬಲ ನೀಡಿದರು. ಸರ್ವ ಪಕ್ಷಗಳ ಮುಖಂಡರನ್ನೂ ಒಗ್ಗೂಡಿಸಿದರು. ಇದೆಲ್ಲದರ ಪರಿಣಾಮ ಕನ್ನಡ ಅಭ್ಯರ್ಥಿಗಳೇ ಚುನಾವಣೆಯಲ್ಲಿ ಆಯ್ಕೆಯಾದರು. ರಕ್ಷಣಾ ವೇದಿಕೆಯ ಸಾಮಾನ್ಯ ಕಾರ‍್ಯಕರ್ತೆಯಾಗಿದ್ದ ಪ್ರಶಾಂತ ಬುಡವಿ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಆಗಿ ಆಯ್ಕೆಯಾದರು!
ಬರೋಬ್ಬರಿ ೧೯ ವರ್ಷಗಳ ನಂತರ ಬೆಳಗಾವಿ ಪಾಲಿಕೆ ಕನ್ನಡಿಗರ ಕೈಗೆ!!
ಇಷ್ಟೆಲ್ಲಾ ಘಟನೆ ನಂತರವೂ ಎಂಇಎಸ್ ತನ್ ಪುಂಡಾಟಿಕೆ ಬಿಡಲಿಲ್ಲ. ಮರಾಠಿ ಮಹಾಮೇಳಾವ ಮತ್ತಿತರೆ ಚಟುವಟಿಕೆ ನಡೆಸುವ ಮೂಲಕ ಅದು ಇನ್ನಲ್ಲದ ತಗಾದೆ ತೆಗೆಯುತ್ತಲೇ ಬಂತು. ಮಹಾರಾಷ್ಟ್ರದ ಬುದ್ಧಿಗೇಡಿ ರಾಜಕಾರಣಿಗಳು, ಶಿವಸೇನೆ, ಎಂಎನ್‌ಎಸ್ ನಾಯಕರು ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಜಗಳಕ್ಕೂ ಯತ್ನಿಸಿತ್ತು. ಆದರೆ ಅವೆಲ್ಲದ್ದಕ್ಕೂ ರಕ್ಷಣಾ ವೇದಿಕೆ ಕಾಲಕಾಲಕ್ಕೆ, ಸಂದರ್ಭಕ್ಕೆ ತಕ್ಕಂತೆ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ.
ಹಿಂದಿ ಸಪ್ತಾಹ ಏಕೆ?
ನಮ್ಮದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡದಷ್ಟೇ ಸ್ಥಾನಮಾನವನ್ನು ಹಿಂದಿ ಭಾಷೆ ಹೊಂದಿದ್ದರೂ ಅದನ್ನು ರಾಷ್ಟ್ರ ಭಾಷೆ ಎಂದು ಸುಳ್ಳು ಹೇಳುತ್ತಾ ಹಿಂದಿ ಹೇರಿಕೆ ಮಾಡುವ ವ್ಯವಸ್ಥಿತ ಪಿತೂರಿ ವಿರುದ್ಧ ದನಿ ಎತ್ತಿದ್ದು ರಕ್ಷಣಾ ವೇದಿಕೆ. ಹಿಂದಿ ಭಾಷೆಯನ್ನು ಬಲವಂತವಾಗಿ ಹೇರುವ ಮೂಲಕ ಹಿಂದಿ ಮೇಲ್ದರ್ಜೆ ಭಾಷೆ ಇತರ ಭಾಷೆಗಳು ಕೆಳದರ್ಜೆ ಭಾಷೆ ಎಂಬ ಹುನ್ನಾರವನ್ನು ಮಟ್ಟಹಾಕಿದ್ದು ನಾರಾಯಣಗೌಡರು.
ಬಲವಂತವಾಗಿ ಹಿಂದಿ ಹೇರುವಂಥ ಈ ಬೆಳವಣಿಗೆಗಳು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಕನ್ನಡದ ಅಸ್ತಿತ್ವವೇ ಇರುವುದಿಲ್ಲ ಎಂಬ ಮುನ್ಸೂಚನೆ ಅರಿತ ವೇದಿಕೆ ಹಿಂದಿ ಹೇರಿಕೆ ವಿರುದ್ಧ ವ್ಯಾಪಕ ಹೋರಾಟವನ್ನು ನಡೆಸುತ್ತಾ ಬಂದಿದೆ.
ಕರವೇಯ ಹೋರಾಟದ ಹಾದಿಗಳಾವುದೂ ಸುಗುಮವಾಗಿರಲಿಲ್ಲ. ಪೊಲೀಸರ ಲಾಠಿ ಏಟು, ಸಾವಿರಾರು ಕೇಸುಗಳು...ಸರ್ಕಾರದ ಕೆಂಗಣ್ಣು..ಹೀಗೆ ಎಲ್ಲವನ್ನೂ ಅನುಭವಿಸುತ್ತಲೇ ಬಂದಿದೆ. ಪ್ರತೀ ಹೋರಾಟಕ್ಕೆ ಸಿದ್ಧಗೊಂಡಾಗಲೆಲ್ಲಾ ಇಲ್ಲಿನ ಕಾರ‍್ಯಕರ್ತರು ಜೀವಭಯ ಎದುರಿಸುವ ಪರಿಸ್ಥಿತಿಯೂ ಸೃಷ್ಟಿಯಾಗಿದೆ. ಮನೆ, ಮಠ, ಬಂಧು, ಬಳಗ ಎಲ್ಲವನ್ನೂ ಮರೆತು ಎಷ್ಟೋ ದಿನಗಳ ಕಾಲ ಜೈಲಿನಲ್ಲಿ ರಬೇಕಾದ ಸ್ಥಿತಿಯನ್ನೂ ಅನುಭವಿಸಿದ್ದಾರೆ.
ಅಂಥವುಗಳ ಪೈಕಿ ಕಾರವಾರವನ್ನು ಗೋವಾಗೆ ಸೇರಿಸಬೇಕೆಂಬ ಕುತಂತ್ರದ ವಿರುದ್ಧ ಕರವೇ ನಡೆಸಿದ ಹೋರಾಟವೂ ಒಂದು. ಇನ್ನು ಪರಭಾಷೆ ಹಾವಳಿಯಿಂದ ಕನ್ನಡ ಚಿತ್ರರಂಗz ಕಂಗೆಟ್ಟು ಕುಳಿತಿದ್ದಾಗ ನಡೆಸಿದ ಹೋರಾಟವೂ ಐತಿಹಾಸಿಕ. ಹೋರಾಟದ ಫವಾಗಿ ಕನ್ನಡ ಚಿತ್ರಗಳಿಗೆ ಪೂರಕವಾತಾವರಣ ನಿರ್ಮಾಣವಾಯಿತಲ್ಲದೆ, ಮಲ್ಟಿಪ್ಲೆಕ್ಸ್‌ಗಳಲ್ಲೂ ಕನ್ನಡ ಚಿತ್ರಗಳು ಪ್ರದರ್ಶಿತಗೊಳ್ಳಲು ಅವಕಾಶ ದೊರೆಯಿತು. ಅಷ್ಟಲ್ಲದೆ, ಕನ್ನಡಿಗರ ಜೀವನದಿಯಾಗಿದ್ದ ಮಹಾದಾಯಿ ನದಿ ನೀರಿನಲ್ಲಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ನಡೆಸಿದ ಬೃಹತ್ ಜಾಥಾ ಕೂಡ ಐತಿಹಾಸಿಕ. ನವೆಂಬರ್ ೧ ರಂದು ಕನ್ನಡ ಬಾವುಟ ಹಾರಿಸುವಂತಿಲ್ಲ ಎಂಬ ಸರ್ಕಾರದ ಎಡಬಿಡಂಗಿ ಆದೇಶದ ವಿರುದ್ಧ ಚಳವಳಿ ನಡೆಸಿ, ಆದೇಶವನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದು ಇದೇ ಕರ್ನಾಟಕ ರಕ್ಷಣಾ ವೇದಿಕೆ
ತಿರುವಳ್ಳುವರ್ ವಿವಾದ
ಇನ್ನು ತಿರುವಳ್ಳುವರ್ ಪ್ರತಿಮೆ ವಿವಾದ ಕರ್ನಾಟಕ ರಕ್ಷಣಾ ವೇದಿಕೆ ಪಾಲಿಗೆ ಅತ್ಯಂತ ಮಹತ್ವದ್ದು. ಕೆಲವು ಎಲ್‌ಟಿಟಿಇ ಬೆಂಬಲಿಗರು ಬೆಂಗಳೂರಿನಲ್ಲಿ ತಮಿಳು ಕವಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಅದನ್ನು ಗಟ್ಟಿ ದನಿಯಲ್ಲಿ ವಿರೋಧಿಸಿ, ಭದ್ರ ಹೋರಾಟಕ್ಕೆ ಬುನಾದಿ ಹಾಕಿದ್ದು ಕನ್ನಡಪರ ಕಾರ್ಯಕರ್ತರು. ತಮಿಳು ಶಕ್ತಿಗಳು ತಮ್ಮ ಇನ್ನಿಲ್ಲದ ಪ್ರಾಬಲ್ಯ, ಪ್ರಭಾವ ಬಳಸಿ ಏನೆಲ್ಲಾ ಹುನ್ನಾರಗಳನ್ನು ನಡೆಸಿದರೂ ಅದಕ್ಕೆ ಜಗ್ಗದ ಕನ್ನಡ ಹೋರಾಟಗಾರರು ರಾಜ್ಯವ್ಯಾಪಿ ಹೋರಾಟಕ್ಕೆ ಮುನ್ನುಡಿ ಬರೆದದ್ದೂ ಆಯಿತು.
ಆದರೆ ಕನ್ನಡಿಗರ ಸ್ವಾಭಿಮಾನದ ಹೋರಾಟದ ಪರವಾಗಿ ನಿಲ್ಲಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಹಲವಾರು ವರ್ಷಗಳಿಂದ ಹಲಸೂರು ಕೆರೆ ಆವರಣದಲ್ಲಿ ಮುಸುಕು ಹೊತ್ತು ನಿಂತಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣಗೊಳಿಸುವ ನಿರ್ಧಾರಕ್ಕೆ ಬಂದರು. ತನ್ಮೂಲಕ ಕನ್ನಡಿಗರ ಬೆನ್ನಿಗೆ ಇರಿದರು. ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಹೂರ್ತವನ್ನೂ ನಿಗದಿಗೊಳಿಸಿದರು. ಪ್ರತಿಮೆ ಅನಾವರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರಕ್ಷಣಾ ವೇದಿಕೆಯ ನಾರಾಯಣಗೌಡರೂ ಸೇರಿದಂತೆ ಸಾವಿರಾರು ಕಾರ‍್ಯಕರ್ತರನ್ನು ಪೊಲೀಸರು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ತಳ್ಳಿದರು. ತಮಿಳುನಾಡಿನಿಂದ ದೌಡಾಯಿಸಿ ಬಂದ ಮುಖ್ಯಮಂತ್ರಿ ಕರುಣಾನಿಧಿ ಯಡಿಯೂರಪ್ಪ ಅವರನ್ನು ‘ಚಿನ್ನತಂಬಿ’ ಅಂತ ಬಾಯ್ತುಂಬಾ ಕರೆದು, ನೆಟಿಕೆ ಮುರಿದು, ಪ್ರತಿಮೆ ಅನಾವರಣಗೊಳಿಸಿ ನೆಟ್ಟಗೆ ಎದ್ದುಹೋದರು.
ಕನ್ನಡಿಗರ ಆಕ್ರೋಶವನ್ನು, ಸ್ವಾಭಿಮಾನವನ್ನು ಪೊಲೀಸ್ ಬಲದ ಮೂಲಕ ನಿಯಂತ್ರಿಸಿ ಸಂಭ್ರಮಿಸಿದ ಯಡಿಯೂರಪ್ಪನವರ ದರ್ಪ, ದವಲತ್ತಿಗೆ ಕನ್ನಡಿಗರು ಮೌನ ಪ್ರತಿಭಟನೆ ವ್ಯಕ್ತಪಡಿಸಬೇಕಾಯಿತು. ಸೂಕ್ತ ಕಾಲದಲ್ಲಿ ಸೂಕ್ತ ಉತ್ತರ ನೀಡುವ ಕನ್ನಡಿಗರ ಸಾತ್ವಿಕ ಸಿಟ್ಟಿನಿಂದ ಯಡಿಯೂರಪ್ಪ ಖಂಡಿತಾ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕುತಂತ್ರದಿಂದ ತಿರುವಳ್ಳುವರ್ ಪ್ರತಿಮೆ ಅನಾವರಣಗೊಳಿಸಿದ ಯಡಿಯೂರಪ್ಪ ಅದಕ್ಕೆ ತಕ್ಕ ಪಾಠವನ್ನು ಕಲಿತೇ ಕಲಿಯುತ್ತಾರೆ.
ಹೊಗೇನಕಲ್ ಗಡಿ ವಿವಾದ
ಕಾಲದಿಂದಲೂ ನೆರೆಯ ತಮಿಳು ನಾಡು ಕರ್ನಾಟಕದ ಜತೆ ಹಲವು ಯೋಜನೆಗಳಿಗೆ ಸಂಬಂಧಿಸಿದಂತೆ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಲೇ ಇದೆ. ಅದು ಕಾವೇರಿ ವಿವಾದವಾಗಿರಬಹುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಮಾನ ನೀಡುವ ಬಗ್ಗೆಯಾದರೂ ಆಗಬಹುದು ಅಥವಾ ಹೊಗೇನಕಲ್ ವಿವಾದವಾದರೂ ಆಗಿರಬಹುದು. ಆಳುವ
ಸರ್ಕಾರಗಳ ಬೇಜವಾಬ್ದಾರಿ ನಡವಳಿಕೆ, ದಿವ್ಯ ನಿರ್ಲಕ್ಷ್ಯದಿಂದ ಏನೆಲ್ಲಾ ಯಡವಟ್ಟುಗಳು ಆಗಬಹುದೋ ಅವೆಲ್ಲಕ್ಕೆ ಸೂಕ್ತ ಉದಾಹರಣೆ ಅಂದ್ರೆ ಹೊಗೇನಕಲ್ ವಿವಾದ.
ಏನೆಲ್ಲಾ ಕಾಯ್ದೆ, ಕಾನೂನು, ಇತಿಹಾಸ ಕೆದಕಿದರೂ ಹೊಗೇನಕಲ್ ಕರ್ನಾಟಕಕ್ಕೇ ಸೇರಿದ್ದು ಎಂಬ ಪುರಾವೆ ದೊರೆಯುತ್ತದೆ. ಆದರೆ ಅವೆಲ್ಲವನ್ನೂ ಉಲ್ಲಂಘಿಸುವ ಉದ್ಧಟತನ ತಮಿಳುನಾಡು ಸರ್ಕಾರದ್ದು. ಹೊಗೇನಕಲ್‌ನಲ್ಲಿ ಕಾಮಗಾರಿ ನಡೆಸುವ ಮೂಲಕ ಕರ್ನಾಟಕ್ಕೆ ಮಂಕು ಬೂದಿ ಎರಚುವ ದುಸ್ಸಾಹಸಕ್ಕೆ ರಕ್ಷಣಾ ವೇದಿಕೆ ಚಳವಳಿಗಳ ಮೂಲಕ ಸೂಕ್ತ ಉತ್ತರವನ್ನೇ ನೀಡುತ್ತಾ ಬಂದಿದೆ. ಶಿವನಸಮುದ್ರ ಯೋಜನೆಗೆ ಕಿತಾಪತಿ ಮಾಡಿದ ತಮಿಳುನಾಡಿನ ಕಿಡಿಗೇಡಿ ರಾಜಕಾರಣಿಗಳು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವ ಹುನ್ನಾರ ಹೂಡಿದ್ದನ್ನೂ ವೇದಿಕೆ ಬೆತ್ತಲುಗೊಳಿಸಿದೆ. ಕರ್ನಾಟಕದಲ್ಲಿ ತಮಿಳನ್ನು ಎರಡನೇ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಧಾರ್ಷ್ಟ್ಯತನಕ್ಕೂ ಬಲವಾದ ಪೆಟ್ಟು ನೀಡಿದೆ.
ಹಾಗೆ ನೋಡಿದರೆ, ಹೊಗೇನಕಲ್ ವಿವಾದ ಅತ್ಯಂತ ಗಂಭೀರವಾದದ್ದು. ರಾತ್ರೋರಾತ್ರಿ ಹೊಗೇನಕಲ್‌ನಲ್ಲಿ ಯೋಜನೆ ಆರಂಭಿಸುವ ದುಸ್ಸಾಹಸಕ್ಕೆ ಇಳಿದ ತಮಿಳುನಾಡು ಸರ್ಕಾರದ ಕೃತ್ಯದ ಮೇಲೆ ಚಾಮರಾಜನಗರದ ರಕ್ಷಣಾ ವೇದಿಕೆ ಕಾರ‍್ಯಕರ್ತರು ಪ್ರತಿಭಟಿಸುತ್ತಲೇ ಇದ್ದಾರೆ. ರಾಜ್ಯಾದ್ಯಂತ ಹೋರಾಟ ನಡೆಯುತ್ತಲೇ ಇದೆ.
ಹೊಗೇನಕಲ್ ಯೋಜನೆಯ ವಿವಾದ ಭುಗಿಲೆಬ್ಬಿಸಿ ಗಾಯದ ಮೇಲೆ ಉಪ್ಪು ಸವರುವ ಕೆಲಸ ಮಾಡುವುದು ಸಲ್ಲದು ಅಂತ ಖುದ್ದು ಹೈಕೋರ್ಟ್ ‘ಬುದ್ಧಿ’ ಮಾತು ಹೇಳಿದೆ. ವಿವಾದವನ್ನು ಸರ್ಕಾರದ ಮಟ್ಟದಲ್ಲಿಯೇ ಬಗೆಹರಿಸಿ ಅಂತಲೂ ಅದು ಸೂಚಿಸಿದೆ. ಅಷ್ಟಾದರೂ ತಮಿಳುನಾಡು ತನ್ನ ಕ್ಯಾತೆ ನಿಲ್ಲಿಸುವ ಲಕ್ಷಣಗಳು ಕಾಣುತ್ತಿಲ್ಲ. ಕರ್ನಾಟಕ ಸರ್ಕಾರಕ್ಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಮನಸ್ಸು ಇದ್ದಂತಿಲ್ಲ.
ಜೀವ ಹೋದರೂ ಸರಿ ಕರ್ನಾಟಕದ ಒಂದಿಂಚು ನೆಲವೂ ತಮಿಳುನಾಡಿನ ಪಾಲಾಗಲು ಬಿಡೆವು ಎನ್ನುವ ವೇದಿಕೆ ಧ್ಯೇಯ ವಾಕ್ಯವನ್ನ ನಮ್ಮ ಸರ್ಕಾರಗಳು, ಜನನಾಯಕರು ಅರ್ಥ ಮಾಡಿಕೊಳ್ಳಬೇಕಷ್ಟೇ.
ದಿಕ್ಕು ಬದಲಾಗದು...
ಕರ್ನಾಟಕ ರಕ್ಷಣಾ ವೇದಿಕೆಗೆ ಕನ್ನಡವೇ ಧರ್ಮ, ಕನ್ನಡವೇ ದೇವರು ಮತ್ತು ಕನ್ನಡವೇ ಜಾತಿ. ಇಲ್ಲಿ ಜಾತಿ, ಧರ್ಮದ ಗೊಡವೆಯಿಲ್ಲ. ಹಮ್ಮು ಬಿಮ್ಮು, ಬಿಗುಮಾನವಿಲ್ಲ. ಇಲ್ಲೇನಿದ್ದರೂ ಸರ್ವೋದಯ ತತ್ವ. ವಿಶ್ವಮಾನವ ಸಂದೇಶ.
‘ರೂಪರೂಪಗಳನು ದಾಟಿ
ನಾಮಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವ ದೀಂಟಿ...
ಓ ನನ್ನ ಚೇತನ
ಆಗು ನೀ ಅನಿಕೇತನ....’
-ಎಂಬಂತೆ ಮಹಾನ್ ಕವಿ ಕುವೆಂಪು ಅವರ ಚಿಂತನೆಗಳ ಒಂದಿಷ್ಟಾದರೂ ಪಸರಿಸುವ ಅದಮ್ಯ ಕನಸು ನಾರಾಯಣಗೌಡರದ್ದು.
ಇಲ್ಲಿ ಯಾರನ್ನೂ ದೂಷಿಸುವುದಿಲ್ಲ, ದೂರೀಕರಿಸುವುದೂ ಇಲ್ಲ. ಇಲ್ಲೇನಿದ್ದರೂ ಒಕ್ಕೊರೊಲ ಕನ್ನಡ ಮಂತ್ರ. ಕನ್ನಡ...ಕನ್ನಡ...ಮತ್ತು ಕನ್ನಡ. ಕಾರ‍್ಯಕರ್ತರೇ ಇಲ್ಲಿ ಸೇವಕರು ಮತ್ತು ಅವರೇ ಯಜಮಾನರು. ಪ್ರತಿಯೊಬ್ಬ ಕಾರ‍್ಯಕರ್ತನೊಳಗೂ ಒಬ್ಬ ಅದಮ್ಯ ಸಂಘಟಕ ಇದ್ದೇ ಇರ‍್ತಾನೆ ಅಂತ ನಂಬಿದವರು ನಾರಾಯಣಗೌಡರು. ಆ ಕಾರಣಕ್ಕಾಗೇ ಸರ್ವರಿಗೂ ಮನ್ನಣೆ, ಸರ್ವರಿಗೂ ವಂದನೆ.
ಯಾವುದೇ ಕಾರಣಕ್ಕೂ ರಕ್ಷಣಾ ವೇದಿಕೆಯಲ್ಲಿ ಜಾತಿ, ಮತ, ಧರ್ಮ, ಭಾಷೆಗಳ ಗೋಡೆ ಇಲ್ಲವೇ ಇಲ್ಲ. ಕನ್ನಡತನಕ್ಕೆ ಬದ್ಧರಾಗಿ ಯಾರೇ ಬಂದರೂ ಅವರಿಗೆ ಸ್ವಾಗತ. ವಿಶೇಷವೆಂದರೆ, ಬೇರೆ ಮಾತೃಭಾಷೆಗಳನ್ನು ಹೊಂದಿದವರೂ ವೇದಿಕೆಯ ಹಲವು ಘಟಕಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡ ಕಟ್ಟುವ ಕೆಲಸಕ್ಕೆ ಹೃದಯಪೂರ್ವಕವಾಗಿ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ.
‘ಇವನಾರವ ಇವನಾರವ ಎನ್ನದಿರು
ಇವ ನಮ್ಮವ ಇವ ನಮ್ಮವ ಎನ್ನು’

-ಎಂದು ಶುದ್ಧ ಮನಸ್ಸುಗಳನ್ನು, ವಿಶಾಲ ಹೃದಯಿಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಒಪ್ಪಿಕೊಳ್ಳುವ ಔದಾರ‍್ಯ ಗೌಡರದ್ದು.
ಇನ್ನು ಕಪ್ಪೆ ಆರಭಟ್ಟ ಹೇಳಿದಂತೆ ಕನ್ನಡಿಗರು ‘ಸಾಧುಂಗೆ ಸಾಧು ಮಾಧುರ‍್ಯಂಗೆ ಮಾಧುರ‍್ಯ...ಬಾದಿಪ್ಪ ಕಲಿಗೆ ಕಲಿಯುಗ ವಿಪರೀತನ್...’ ಎನ್ನುವಂತೆ ವೇದಿಕೆಯ ಕಾರ‍್ಯಕರ್ತರು ಸಾಧುಗಳಿಗೆ ಸಾಧು ಮತ್ತು ಬಾಧಿಸುವವರಿಗೆ, ಸುಖಾಸಮ್ಮನೆ ದಬ್ಬಾಳಿಕೆ ನಡೆಸುವವರಿಗೆ ಅಕ್ಷರಶಃ ಕಲಿಗಳೇ.
ರಕ್ಷಣಾ ವೇದಿಕೆಯಲ್ಲಿ ವ್ಯಕ್ತಿ ಮುಖ್ಯವಲ್ಲ. ಇಲ್ಲೇನಿದ್ದರೂ ವಿಚಾರಗಳಿಗಷ್ಟೇ ಆದ್ಯತೆ. ಕನ್ನಡ ವಿಚಾರ, ಕನ್ನಡ ಆಲೋಚನೆ ಮತ್ತು ಕನ್ನಡದ ಅಭಿವೃದ್ಧಿಗಷ್ಟೇ ಕಾರ‍್ಯಕರ್ತರು ಬದ್ಧ. ವೇದಿಕೆಯ ದಶಕದ ಹೋರಾಟ, ಚಳವಳಿಗಳನ್ನು ಸೂಕ್ಷ್ಮವಾಗಿ ಬಲ್ಲವರಿಗಷ್ಟೇ ಇದು ಅರ್ಥವಾದೀತು. ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ಕರ್ನಾಟಕ ರಕ್ಷಣಾ ವೇದಿಕೆಯ ಆಲೋಚನೆಯ ದಿಕ್ಕು, ಹೋರಾಟದ ಶೈಲಿ, ಚಳವಳಿಯ ತೀವ್ರತೆ ಬದಲಾಗದು.
ಬೆಂಗಳೂರು ಕೇಂದ್ರಿತವಾಗಿದ್ದ ಕನ್ನಡ ಚಳವಳಿಯನ್ನು ದಶದಿಕ್ಕುಗಳಿಗೆ ವ್ಯಾಪಿಸುವಂತೆ ಮಾಡಿದ್ದು ನಾರಾಯಣಗೌಡರು. ಹಾಗೆ ನೋಡಿದರೆ ಚಳವಳಿಯ ಮೂಲಕವೇ ಇಡೀ ರಾಜ್ಯವನ್ನು ಭಾವನಾತ್ಮಕವಾಗಿ ಬೆಸೆಯಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಹಿಂದೆಲ್ಲ ಉತ್ತರ ಕರ್ನಾಟಕದ ಜನರ ಸಮಸ್ಯೆಗಳಿಗೆ ಹಳೇ ಮೈಸೂರು ಭಾಗದ ಚಳವಳಿಗಾರರು ಸ್ಪಂದಿಸಿದ್ದು ಕಡಿಮೆ. ಆದರೆ ಕೃಷ್ಣಾ, ಮಹದಾಯಿ ನದಿ ವಿವಾದಗಳೂ ಸೇರಿದಂತೆ ಉತ್ತರ ಕರ್ನಾಟಕದ ಎಲ್ಲ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಉತ್ತರ ಕರ್ನಾಟಕದ ಸುತ್ತಗಲಕ್ಕೂ ಪ್ರವಾಸ ಮಾಡಿ, ಅಲ್ಲಿನ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು ನಾರಾಯಣಗೌಡರ ಹೆಗ್ಗಳಿಕೆ. ಬೆಳಗಾವಿಯಲ್ಲಿ ಮತ್ತೆ ಕನ್ನಡಿಗರು ಸ್ವಾಭಿಮಾನದಿಂದ ತಲೆ ಎತ್ತಿ ಬಾಳುವಂತೆ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ. ಹೀಗಾಗಿ ಬೆಳಗಾವಿ ಕನ್ನಡಿಗರು ನಾರಾಯಣಗೌಡರನ್ನು, ಕರ್ನಾಟಕ ರಕ್ಷಣಾ ವೇದಿಕೆಯನ್ನು ವಿಶೇಷ ಅಭಿಮಾನದಿಂದ ನೋಡುತ್ತಾರೆ.
ಕನ್ನಡಿಗರ ಮುಖವಾಣಿ....
ಕನ್ನಡಿಗರ ಸ್ವಾಭಿಮಾನದ ಸಂಕೇತದಂತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಯಶಸ್ವಿ ನಡಿಗೆಯಲ್ಲಿ ಕರವೇ ನಲ್ನುಡಿ ಮಾಸ ಪತ್ರಿಕೆಯದ್ದು ಮಹತ್ವದ ಹೆಜ್ಜೆ ಗುರುತು. ಕರವೇ ನಲ್ನಡಿ ಕನ್ನಡಿಗರ ಧೀಶಕ್ತಿಯ ಅನಾವರಣ. ಇದು ಕೇವಲ ಕರ್ನಾಟಕ ರಕ್ಷಣಾ ವೇದಿಕೆಯ ಮುಖವಾಣಿಯಷ್ಟೇ ಅಲ್ಲ ಸಮಸ್ತ ಕನ್ನಡಿಗರ ಮುಖವಾಣಿ, ಎದೆಯ ದನಿ.
ನಲ್ನುಡಿ ನಡಿಗೆ ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಅದರ ವ್ಯಾಪಕತೆ ಬೆರಗು ಮೂಡಿಸಿದೆ. ಇದು ಕನ್ನಡ ಮತ್ತು ಕನ್ನಡಿಗರಿಗಾಗಿಯೇ ರೂಪುಗೊಂಡ ಅಪರೂಪದ ಪತ್ರಿಕೆ. ಕನ್ನಡ ಪತ್ರಿಕೋದ್ಯಮದ ಮಟ್ಟಿಗಂತೂ ವಿಶಿಷ್ಟ ಪ್ರಯೋಗ. ‘ಹೀಗೂ ಮಾಡಬಹುದೇ’ ಎಂಬ ಬೆರಗುಗಣ್ಣುಗಳ ನಡುವೆಯೇ ರಕ್ಷಣಾ ವೇದಿಕೆ ತನ್ನ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿ ನಿಂತಿದೆ.
ಟೀಕೆಗಳು-ಟಿಪ್ಪಣಿಗಳು
ಕಳೆದ ಹತ್ತು ವರ್ಷಗಳಿಂದ ಸಮರೋಪಾದಿಯಲ್ಲಿ ಕನ್ನಡ ಕಾಯಕದಲ್ಲಿ ತೊಡಗಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ ಟೀಕೆ-ಟಿಪ್ಪಣಿಗಳನ್ನೂ ಎದುರಿಸುತ್ತ ಬಂದಿದೆ. ಆರೋಗ್ಯಕರ ಟೀಕೆಗಳಿಗೆ ವೇದಿಕೆ ಸ್ಪಂದಿಸುತ್ತದೆ. ಮುಕ್ತ ಸಲಹೆಗಳಿಗೆ ವೇದಿಕೆ ಯಾವತ್ತಿಗೂ ತೆರೆದುಕೊಂಡೇ ಇದೆ. ಕೆಲವರಿರುತ್ತಾರೆ; ಟೀಕೆಗಳಿಗಾಗಿ ಟೀಕಿಸುತ್ತಾರೆ. ಅಂಥವರನ್ನು ವೇದಿಕೆ ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೆ ಕೆಲವರು ಜಾಣ ಜಾಣೆಯರೆಂದು ಬೋರ್ಡು ತಗುಲಿಸಿಕೊಂಡವರು, ಅವರಿಂದ ಹೊರಡುವುದು ಕೇವಲ ಅಮೇಧ್ಯದ ವಾಸನೆ. ಮೀರ್ ಸಾಧಕ್, ಮಲ್ಲಪ್ಪಶೆಟ್ಟಿಗಳಂಥ ಕೊಳಕುಪಿಂಡಗಳಿಂದ ಭಕ್ಷೀಸು ಪಡೆದು ರಕ್ಷಣಾ ವೇದಿಕೆಯ ಮೇಲೆ ಕಲ್ಲು ಒಗೆದು ಹೊಲಸು ಕಾರುವ ಇಂಥ ಕ್ರಿಮಿಗಳು ಎಲ್ಲ ಕಾಲದಲ್ಲೂ ಇರುತ್ತಾರೆ. ‘ಕೊಚ್ಚೆಗೆ ಕಲ್ಲು ಎಸೆಯಬೇಡಿ; ಅದು ನಿಮಗೇ ಸಿಡಿಯುತ್ತದೆ’ ಎಂದು ಹಿರಿಯರು ಎಚ್ಚರಿಸಿದ್ದಾರೆ. ಹೀಗಾಗಿ ಅಂಥವರಿಗೂ ಪ್ರತಿಕ್ರಿಯಿಸುವುದನ್ನು ವೇದಿಕೆ ಇತ್ತೀಚಿಗೆ ಬಿಟ್ಟಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ
ಕನ್ನಡ ಕೊಲ್ಲುವ ಮುನ್ನ ಎನ್ನ ಕೊಲ್ಲು ಎಂದರು ರಾಷ್ಟ್ರಕವಿ ಕುವೆಂಪು. ನಾರಾಯಣಗೌಡರ ಮೂಲಮಂತ್ರವೂ ಇದೆ. ಕನ್ನಡಕ್ಕೆ, ಕನ್ನಡಿಗನಿಗೆ, ಕರ್ನಾಟಕಕ್ಕೆ ಧಕ್ಕೆ ತರುವ ಯಾರೇ ಆದರೂ ಮೊದಲು ನಮ್ಮನ್ನು ಎದುರಿಸಿ ಎಂದು ರಣವೀಳ್ಯ ಕೊಟ್ಟವರು ನಾರಾಯಣಗೌಡರು. ಕನ್ನಡದ ಶತ್ರುಗಳನ್ನು ಯಾವ ಬೆಲೆ ತೆತ್ತಾದರೂ ಮಣಿಸುವ ಧೈರ್ಯ, ಶಕ್ತಿ, ಲಕ್ಷಾಂತರ ಕಾರ್ಯಕರ್ತರ ಬೆಂಬಲ ಅವರಿಗಿದೆ. ಈ ಕ್ಷಾತ್ರ ತೇಜಸ್ಸೇ ಸಂಘಟನೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿದೆ.
ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು, ಈ ನೆಲದ ಸುಖ, ಸಂಪತ್ತು ಎಲ್ಲವೂ ಕನ್ನಡಿಗನಿಗೇ ದೊರೆಯಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಗುರಿ. ಈ ಗುರಿಯ ಮಾರ್ಗದಲ್ಲೇ ವೇದಿಕೆ ಮುನ್ನಡೆಯುತ್ತದೆ.
ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (12-12-2010) ವಿಶೇಷ 2 ಲೇಖನಗಳು
 
ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (06-12-2010) ವಿಶೇಷ ಲೇಖನ
ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (05-12-2010) ವಿಶೇಷ ಲೇಖನ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (25-11-2010) ವಿಶೇಷ ಲೇಖನ

ವಿಜಯ ಕರ್ನಾಟಕ ದಲ್ಲಿ ನಾನು ಓದಿದ ಕೆಲವು ಲೇಖನಗಳು

ನಿಮ್ಮ ಮುಂದೇ

ಇಂದಿನ (11-10-2010) ವಿಶೇಷ ಲೇಖನ